ಮಡಿಕೇರಿ, ಫೆ. ೧೯: ಭಾರತ ಸೇವಾದಳದ ಜಿಲ್ಲಾ ಘಟಕದಿಂದ ಸ್ವಾತಂತ್ರö್ಯ ಸೇನಾನಿ ಭಾರತ ಸೇವಾದಳದ ಮೊದಲ ದಳಪತಿಗಳು ಐ.ಎಸ್.ಎ. ರಾಮರಾವ್ ಅವರ ೧೯ನೇ ಪುಣ್ಯಸ್ಮರಣೆ ಆಚರಿಸ ಲಾಯಿತು.

ಭಾರತ ಸೇವಾದಳ ಜಿಲ್ಲಾ ಸಮಿತಿ ಕೊಡಗು, ಸಂತ ಮೈಕಲರ ಹಿರಿಯ ಪ್ರಾಥಮಿಕ ಶಾಲೆ ಸಹ ಯೋಗದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಎನ್.ಎ. ರಾಮರಾವ್ ಮತ್ತು ನಾ.ಸಂ. ಹರ್ಡೀಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಪಣೆ ಸಲ್ಲಿಸುವುದರೊಂದಿಗೆ ಸರ್ವ ಧರ್ಮಿಯ ಪ್ರಾರ್ಥನೆ ನಡೆಸಲಾ ಯಿತು. ಭಾ.ಸೇ.ದ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಮೋಂತಿ ಗಣೇಶ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲೆಯ ಮುಖ್ಯೋಪಾದ್ಯಾಯರು, ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸುನಿತಾ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು, ಜಿಲ್ಲಾ ಸಂಘಟಕರಾದ ಗವಿಸಿದ್ದನಗೌಡ ಎನ್. ಪಾಟೀಲ್ ಅವರು ಐ.ಎನ್. ರಾಮರಾವ್ ಅವರ ಜೀವನ ಚರಿತ್ರೆಯನ್ನು ಹಾಗೂ ಭಾರತ ಸೇವಾದಳದಲ್ಲಿ ಐ.ಎನ್.ಎ ರಾಮರಾವ್ ಅವರು ಸ್ವಯಂ ಸೇವಕರಾಗಿ ಮತ್ತು ದಳಪತಿಗಳಾಗಿ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂಬುದನ್ನು ತಿಳಿಸಿದರು.

ಮೋಂತಿ ಗಣೇಶ್ ಮಾತನಾಡಿ, ಮಕ್ಕಳಿಗೆ ಶಿಸ್ತು, ದೇಶಪ್ರೇಮ, ರಾಷ್ಟಿçÃಯ ಭಾವೈಕ್ಯತೆಯ ಸಂದೇಶ ವನ್ನು ಸಾರಿ ಭಾರತ ಸೇವಾದಳ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮಕ್ಕಳಿಗೆ ಕರೆ ನೀಡಿದರು. ಶಾಲೆಯ ಮುಖ್ಯೋಪಾದ್ಯಾಯರಾದ ಸಿಸ್ಟರ್ ಪ್ರತಿಮಾ ಅವರು ಮಕ್ಕಳನ್ನುದ್ದೇಶಿಸಿ ಮಾತನಾಡಿದರು. ಶಿಕ್ಷಕಿ ಸುನಿತಾ ಅವರು ಸರ್ವರನ್ನು ಸ್ವಾಗತಿಸಿದರು.