ನಾಪೋಕ್ಲು, ಫೆ. ೧೯: ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಪುರುಷರ ಅಂತರ ಸಾಯಿ ಹಾಕಿ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲೆಯ ಆಟಗಾರರನ್ನು ಒಳಗೊಂಡ ಬೆಂಗಳೂರು ಸಾಯಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ರಾಷ್ಟçದ ೯ ಸಾಯಿ ತಂಡಗಳು ಪಾಲ್ಗೊಂಡಿದ್ದ ಕ್ರೀಡಾಕೂಟದಲ್ಲಿ ಬೆಂಗಳೂರು ತಂಡವು ಕುರುಕ್ಷೇತ್ರ ತಂಡವನ್ನು ೩-೨ ಗೋಲುಗಳಿಂದ ಮಣಿಸಿತು.

ಜಿಲ್ಲೆಯ ಆಟಗಾರರಾದ ಕುಲ್ಲೆಟೀರ ವಚನ್ ಕಾಳಪ್ಪ, ಬಿದ್ದಾಟಂಡ ಅಖಿಲ್ ಅಯ್ಯಪ್ಪ, ಚೋಕಿರ ಕುಶಾಲ್ ಬೋಪಯ್ಯ, ಚೋಯಮಾಡಂಡ ಬಿದ್ದಪ್ಪ, ತೀತಿಮಾಡ ಯಶಸ್, ಕಂಬೀರAಡ ಮಾನವ್, ಮಂಡೇಟಿರ ಧನುಷ್ ತಂಡದಲ್ಲಿದ್ದರು. ಪದ್ಮಶ್ರೀ ಪುರಸ್ಕöÈತ ಡಾ.ಮೊಳ್ಳೇರ ಪಿ.ಗಣೇಶ್ ಅತಿಥಿಯಾಗಿ ಭಾಗವಹಿಸಿದ್ದರು.