ಮಡಿಕೇರಿ, ಫೆ. ೨೦: ಪತ್ರಕರ್ತ ಅನಿಲ್ ಎಚ್.ಟಿ. ರಚಿತ ‘ಅಯೋಧ್ಯೆ’ ಪುಸ್ತಕ ಲೋಕಾರ್ಪಣೆ ತಾ.೨೩ ರಂದು ಸಂಜೆ ೬ ಗಂಟೆಗೆ ನಗರದ ರೆಡ್ ಬ್ರಿಕ್ಸ್ ಇನ್ ಕಟ್ಟಡದ ಸತ್ಕಾರ ಸಭಾಂಗಣದಲ್ಲಿ ನಡೆಯಲಿದೆ. ಹಿರಿಯ ಸಾಹಿತಿ ಗಜಾನನ ಶರ್ಮ ಅವರು ಪುಸ್ತಕವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಶಕ್ತಿ ದಿನಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.