ನವದೆಹಲಿ, ಮಾ. ೩೧: ಇತ್ತೀಚೆಗೆ ಚುನಾವಣಾ ಬಾಂಡ್ ಭಾರೀ ಸುದ್ದಿ ಮಾಡುತ್ತಿದೆ. ಸುಪ್ರೀಂಕೋರ್ಟ್ನ ಛಾಟಿ ಏಟಿನಿಂದ ಬೆದರಿದ ಎಸ್.ಬಿ.ಐ ಬ್ಯಾಂಕ್ ಅಧಿಕಾರಿಗಳು ದಿಢೀರ್ ಎಚ್ಚೆತ್ತರು. ಬ್ಯಾಂಕ್‌ನಲ್ಲಿದ್ದ ಎಲ್ಲ ರಾಜಕೀಯ ಪಕ್ಷಗಳು ಬಾಂಡ್‌ಗಳ ಮೂಲಕ ಪಡೆದ ಚುನಾವಣಾ ಆರ್ಥಿಕ ನೆರವು ವಿವರವನ್ನು ದೇಶದ ಚುನಾÀವಣಾ ಆಯೋಗಕ್ಕೆ ಬ್ಯಾಂಕ್ ಇದೀಗ ಸಲ್ಲಿಸಿದೆ,

“ಮಾರ್ಚ್ ೨೧, ೨೦೨೪ ರಂದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಸ್ವಾಧೀನದಲ್ಲಿರುವ ಮತ್ತು ಕಸ್ಟಡಿಯಲ್ಲಿರುವ ಚುನಾವಣಾ ಬಾಂಡ್‌ಗಳ ಎಲ್ಲಾ ವಿವರಗಳನ್ನು ಭಾರತೀಯ ಚುನಾವಣಾ ಆಯೋಗಕ್ಕೆ ಒದಗಿಸಿದೆ/ ಬಹಿರಂಗಪಡಿಸಿದೆ” ಎಂದು ಸ್ಟೇಟ್ ಬ್ಯಾಂಕ್ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ ಅಫಿಡವಿಟ್‌ನಲ್ಲಿ ಸುಪ್ರೀಂಕೋರ್ಟ್ಗೆ ತಿಳಿಸಿದರು. ಆಗ ಅಪ್ಲೋಡ್ ಮಾಡಲಾದ ಎರಡು ಪ್ರತ್ಯೇಕ ಪಟ್ಟಿಗಳು ಬಾಂಡ್ ಖರೀದಿಸಿದವರ ಹೆಸರು, ಅದರ ಮುಖಬೆಲೆ ಮತ್ತು ಬಾಂಡ್ ಸಂಖ್ಯೆ, ಅದನ್ನು ಎನ್ಕಾö್ಯಶ್ ಮಾಡಿದ ಪಕ್ಷದ ಹೆಸರು, ಬಾಂಡ್ ರಿಡೀಮ್ ಮಾಡಿದ ರಾಜಕೀಯ ಪಕ್ಷಗಳ ಬ್ಯಾಂಕ್ ಖಾತೆ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳು ಮತ್ತು ಪಂಗಡ ಮತ್ತು ಎನ್ಕಾö್ಯಶ್ ಮಾಡಿದ ಬಾಂಡ್‌ನ ಅನನ್ಯ ಸಂಖ್ಯೆಯನ್ನು ಒಳಗೊಂಡಿದೆ. ಆದರೂ, ಈ ಖಾತೆಗಳ ಭದ್ರತೆಗೆ ರಾಜಿಯಾಗ ಬಹುದಾದ್ದರಿಂದ ಬಾಂಡ್‌ಗಳನ್ನು ರಿಡೀಮ್ ಮಾಡಿದ ರಾಜಕೀಯ ಪಕ್ಷಗಳ ಸಂಪೂರ್ಣ ಬ್ಯಾಂಕ್ ಖಾತೆ ಸಂಖ್ಯೆಗಳು ಮತ್ತು ಕೆವೈಸಿ ವಿವರಗಳನ್ನು ಸಾರ್ವಜನಿಕಗೊಳಿಸಲಾಗಿಲ್ಲ ಎಂದು ಎಸ್.ಬಿ.ಐ ಅಧ್ಯಕ್ಷರು ಹೇಳಿದ್ದಾರೆ. ಭದ್ರತಾ ಕಾರಣಗಳಿಗಾಗಿ ಖರೀದಿದಾರರ ಎಲ್ಲ ವಿವರಗಳನ್ನು ಸಹ ಸಾರ್ವಜನಿಕಗೊಳಿಸಲಾಗಿಲ್ಲ ಎಂದು ತಿಳಿಸಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಾಂಡ್‌ಗಳನ್ನು ಮಾರಾಟ ಮಾಡಲು ಮತ್ತು ರಿಡೀಮ್ ಮಾಡಲು ಅಧಿಕೃತ ಬ್ಯಾಂಕ್ ಆಗಿದೆ, ಇದನ್ನು ಮೊದಲು ಮಾರ್ಚ್ ೨೦೧೮ ರಲ್ಲಿ ನೀಡಲಾಯಿತು ಮತ್ತು ಕಳೆದ ತಿಂಗಳು ಈ ಯೋಜನೆಯನ್ನು ಅಮಾನ್ಯ ಮತ್ತು ಅನೂರ್ಜಿತ ಎಂದು ಘೋಷಿಸುವವರೆಗೆ ಮಾರಾಟ ಮಾಡಲಾಗುತ್ತಿತ್ತು. ಚುನಾವಣಾ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಎಲ್ಲಾ ಚುನಾವಣಾ ಬಾಂಡ್‌ಗಳಿಗೆ ಸಂಬAಧಿಸಿದ ಡೇಟಾವನ್ನು ಅಪ್ಲೋಡ್ ಮಾಡಿದೆ. ಚುನಾವಣಾ ಸಮಿತಿಯ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಲಾದ ಇತ್ತೀಚಿನ ಡೇಟಾವು ದಾನ ಮತ್ತು ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸುವವರ ನಡುವಿನ ಸಂಬAಧವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇದರಲ್ಲಿ ವಿಶಿಷ್ಟ ಬಾಂಡ್ ಸಂಖ್ಯೆ ಸೇರಿದಂತೆ ಖರೀದಿದಾರ ಮತ್ತು ಸ್ವೀಕರಿಸುವವರ ರಾಜಕೀಯ ಪಕ್ಷದ ನಡುವಿನ ಸಂಬAಧವನ್ನು ಬಹಿರಂಗಪಡಿಸಲಾಗಿದೆ. ವರ್ಷಗಳ ಕಾಲ ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇತ್ತೀಚೆಗೆ ಇವುಗಳನ್ನು £ಲ್ಲಿಸುವಂತೆ ಭಾರತೀಯ ಸ್ಟೇಟ್ ಬ್ಯಾಂಕ್‌ಗೆ ಸೂಚಿಸಿತ್ತು. ಅಲ್ಲದೆ, ಈವರೆಗೆ ಬಾಂಡ್‌ಗಳ ಹೆಸರಿನಲ್ಲಿ ಯಾವ್ಯಾವ ಪಕ್ಷಕ್ಕೆ ಎಷ್ಟೆಷ್ಟು ಹಣ ಹೋಗಿದೆ ಎಂಬುದರ ಸಂಪೂರ್ಣ ಮಾಹಿತಿ ನೀಡುವಂತೆ ಸೂಚಿಸಿತ್ತು. ಅಲ್ಲದೆ, ದೇಣಿಗೆದಾರರ ಮಾಹಿತಿಯನ್ನು ಗೌಪ್ಯವಾಗಿರಿಸುವುದು ಮಾಹಿತಿ ಹಕ್ಕು ಕಾಯ್ದೆಯ ಉಲ್ಲಂಘನೆಯಾಗಿದೆ ಹಾಗೂ ಸಂವಿಧಾನದ ೧೯ (೧) (ಎ) ಅನುಚ್ಛೇದದಲ್ಲಿ ಹೇಳಲಾಗಿರುವ ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ ಧಕ್ಕೆ ತರುತ್ತದೆ ಎಂದು ಹೇಳಿದ ಸುಪ್ರೀಂ ಕೋರ್ಟ್ ಈ ಬಾಂಡ್‌ಗಳನ್ನು ನಿಲ್ಲಿಸುವಂತೆ ಸೂಚಿಸಿತ್ತು. ಅಂತಿಮವಾಗಿ ಮಾರ್ಚ್ ೨೧ ರಂದು ಚುನಾವಣಾ ಆಯೋಗವು ಚುನಾವಣಾ ಬಾಂಡ್‌ಗಳಿಗೆ ಸಂಬAಧಿಸಿದ ಡೇಟಾವನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿತು. ದಾನ ಮತ್ತು ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸುವವರ ನಡುವಿನ ಸಂಬAಧವನ್ನು ಡೇಟಾ ತೋರಿಸುತ್ತದೆ. ಚುನಾವಣಾ ಬಾಂಡ್‌ಗಳ ವಿರುದ್ಧ ಬಂದಿದ್ದ ಟೀಕೆಗಳು, ಆರೋಪಗಳು ಸುಪ್ರೀಂಕೋರ್ಟ್ನಲ್ಲೂ ಪ್ರತಿಧ್ವನಿಸಿದ್ದÀವು. ಕೆಲವು ಸಂಘ ಸಂಸ್ಥೆಗಳು ಇವುಗಳ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಿದ್ದವು. ಅವೆಲ್ಲವುಗಳ ಒಟ್ಟಾರೆ ಆರೋಪ ಒಂದೇ - ಈ ಬಾಂಡ್‌ಗಳೂ ಕಪ್ಪು ಹಣದ ಹರಿವಿಗೆ ನಾಂದಿ ಹಾಡುತ್ತವೆ ಎಂಬುದು.

ಮಹತ್ವದ ತೀರ್ಪಿನಲ್ಲಿ, ಭಾರತದ ಸರ್ವೋಚ್ಚ ನ್ಯಾಯಾಲಯವು ಚುನಾವಣಾ ಬಾಂಡ್‌ಗಳ ಯೋಜನೆಯನ್ನು ರದ್ದುಗೊಳಿಸಿದೆ, ಇದು ದೇಶದ ರಾಜಕೀಯ ಪ್ರಭಾವೀ ಲೋಕದಲ್ಲಿ ಪಾರದರ್ಶಕತೆಯ ಹೊಸ ಯುಗಕ್ಕೆ ನಾಂದಿ ಹಾಡಿದೆ. ಅನಿಯಮಿತ ರಾಜಕೀಯ ದೇಣಿಗೆಗಳನ್ನು ಅನುಮತಿಸುವ ತಿದ್ದುಪಡಿಗಳನ್ನು ಅಮಾನ್ಯಗೊಳಿಸುವ ತೀರ್ಪು, ಚುನಾವಣಾ ಪ್ರಕ್ರಿಯೆಗಳಲ್ಲಿ ಭ್ರಷ್ಟಾಚಾರ ಮತ್ತು ಅನಗತ್ಯ ಪ್ರಭಾವದ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಮಹತ್ವದ ಮೈಲಿಗಲ್ಲನ್ನು ಸೂಚಿಸುತ್ತದೆ.

ಬಾಂಡ್‌ಗಳ ಬಗ್ಗೆ ಎದ್ದಿದ್ದ ಅಪಸ್ವರಗಳೇನು?

ಈ ಬಾಂಡ್‌ಗಳನ್ನು ಕೇಂದ್ರ ಸರ್ಕಾರ ಪ್ರಸ್ತಾಪ ಮಾಡಿದ ನಂತರ, ಈ ಬಾಂಡ್‌ಗಳ ಬಗ್ಗೆ ಅಪಸ್ವರಗಳು ಎದ್ದಿದ್ದವು. ಈ ಬಾಂಡ್‌ಗಳನ್ನು ಕೊಳ್ಳುವವರ ಹೆಸರನ್ನು ಸಾರ್ವತ್ರಿಕವಾಗಿ ಪ್ರಕಟಿಸದೆ ನಿರ್ಬಂಧ ವಿಧಿಸಲಾಗಿರುವ ಬಗ್ಗೆ ಹಲವಾರು ಟೀಕೆಗಳು ಬಂದಿದ್ದವು. ಕಪ್ಪು ಹಣವನ್ನು ನಿಗ್ರಹಿಸಲೆಂದೇ ಜಾರಿಗೆ ತರಲಾದ ಈ ಬಾಂಡ್‌ಗಳಿAದ ಕಪ್ಪು ಹಣವನ್ನು ಬೇರೆ ರೀತಿಯಲ್ಲಿ ಪಡೆದ ಹಾಗಾಗುತ್ತದೆ ಎಂದು ಹೇಳಲಾಗಿತ್ತು. ಈ ಬಾಂಡ್‌ಗಳ ಬಗ್ಗೆ ಬಂದ ಮತ್ತೊಂದು ಆರೋಪವೆಂದರೆ, ಅದು ರಾಜ್ಯಗಳ ಮಟ್ಟದಲ್ಲಾಗಲೀ, ಕೇಂದ್ರದ ಮಟ್ಟದಲ್ಲಾಗಲೀ, ಯಾವ ಪಕ್ಷ ಅಧಿಕಾರದಲ್ಲಿರುತ್ತದೋ ಆ ಪಕ್ಷಕ್ಕೇ ಹೆಚ್ಚು ದೇಣಿಗೆ ಬರುತ್ತದೆ ಎಂಬುದು. ಎಲ್ಲಾ ಪಕ್ಷಗಳಿಗೂ ಸಮಾನವಾದ ದೇಣಿಗೆ ಸಿಗಲಾರದು ಎಂದು ಈ ಬಾಂಡ್‌ಗಳ ಟೀಕಾಕಾರರು ಆರೋಪಿಸುತ್ತಿದ್ದರು. ಇದೀಗ ಬಹಿರಂಗಗೊAಡ ಬಾಂಡ್‌ಗಳ ಸಂಪೂರ್ಣ ಮಾಹಿತಿಯನ್ನು ಮುಂದಿನ “ಶಕ್ತಿ”ಯಲ್ಲಿ ಸರಣಿ ರೂಪದಲ್ಲಿ ನೀಡಲಾಗುವುದು.