ಕುಶಾಲನಗರ, ಏ. ೧: ಕುಶಾಲನಗರ ಸಮೀಪದ ಆನೆಕಾಡು ಸರ್ಕಾರಿ ನಾಟಾ ಸಂಗ್ರಹಾಲಯದಲ್ಲಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಕುಶಾಲನಗರ ಕಾವೇರಿ ನಿಸರ್ಗಧಾಮ ಪ್ರವಾಸಿ ಕೇಂದ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅರಣ್ಯ ಅಧಿಕಾರಿ ಎನ್. ಬಿ. ಸುರೇಶ್, ಸಂದೀಪ್, ಉಮೇಶ್ ಹಾಗೂ ಮುಂಬಡ್ತಿ ಹೊಂದಿದ ಉಪ ವಲಯ ಅರಣ್ಯ ಅಧಿಕಾರಿ ವೆಂಕಟೇಶ್, ಸಮೀರ್ ಅಹಮದ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಅರಣ್ಯ ವಲಯ ಅಧಿಕಾರಿ ಡಿ.ವಿ. ಪೂಜಾಶ್ರೀ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ. ಗೋಪಾಲ್ ಪಾಲ್ಗೊಂಡಿದ್ದರು.

ಕಾರ್ಯಕ್ರಮ ಆಯೋಜಕರಾದ ಉಪ ವಲಯ ಅರಣ್ಯ ಅಧಿಕಾರಿ ಪಿ.ಪಿ. ಮಹದೇವ ನಾಯಕ, ನೂತನವಾಗಿ ನೇಮಕಗೊಂಡ ಉಪವಲಯ ಅರಣ್ಯ ಅಧಿಕಾರಿಗಳಾದ ಸುರೇಶ್ ಕೊಳೇಕರ್, ಲಿಂಗಪ್ಪ ಅಶೋಕ್, ಗಸ್ತು ಅರಣ್ಯ ಪಾಲಕರಾದ ಪ್ರಸಾದ್, ಮೋಹನ್ ಸಿಬ್ಬಂದಿಗಳು ಇದ್ದರು.