ಪೊನ್ನಂಪೇಟೆ, ಮೇ ೬: ಕೊಡಗು ಹೆಗ್ಗಡೆ ಸಮಾಜದ ವತಿಯಿಂದ ಹಾತೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ೨೧ ನೇ ವರ್ಷದ ಕೊಡಗು ಹೆಗ್ಗಡೆ ಸಮಾಜದ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ ಎಳೆಯಲಾಯಿತು. ಮೂರು ದಿನಗಳವರೆಗೆ ನಡೆದ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಹಾತೂರು ವಲಯ ತಂಡ, ಹಾಲುಗುಂದ ವಲಯ ತಂಡದ ವಿರುದ್ಧ ೨ ರನ್‌ಗಳಿಂದ ರೋಚಕ ಜಯಭೇರಿ ಬಾರಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು. ಗೆಲುವಿಗಾಗಿ ಉತ್ತಮ ಹೋರಾಟ ನೀಡಿದ ಹಾಲುಗುಂದ ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಟಾಸ್ ಗೆದ್ದು ಹಾಲುಗುಂದ ತಂಡ ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದುಕೊಂಡ ಹಾತೂರು ತಂಡ ನಿಗದಿತ ೮ ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ೭೨ ರನ್ ಗಳಿಸಿತು. ನಿತಿನ್ ೨೮ , ಸಚಿನ್ ೩೦ ರನ್ ಗಳಿಸಿ ಮಿಂಚಿದರು.

ಹಾಲುಗುAದ ಪರ ಸುಜನ್ ೧ ವಿಕೆಟ್ ಪಡೆದುಕೊಂಡರು ಗೆಲ್ಲಲು ೭೩ ರನ್‌ಗಳ ಗುರಿ ಬೆನ್ನಟ್ಟಿದ ಹಾಲುಗುಂದ ತಂಡ ನಿಗದಿತ ಓವರ್‌ಗಳಲ್ಲಿ ೭೦ ರನ್ ಗಳಿಸಿ ಸೋಲನುಭವಿಸುವ ಮೂಲಕ ರನ್ನರ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ತಂಡದ ಪರ ಶ್ರೇಯಸ್ ೨೨, ಅವಿನಾಶ್ ೨೦ ರನ್ ಗಳಿಸಿದರು. ವಿಜೇತ ತಂಡದ ಪರ ಜತನ್ ಮತ್ತು ಪವನ್ ತಲಾ ೧ ವಿಕೆಟ್ ಪಡೆದುಕೊಂಡರು.

ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಕೊಂಗೆಪAಡ ಸಚಿನ್, ಬೆಸ್ಟ್ ಬ್ಯಾಟ್ಸ್ಮನ್ ಆಗಿ ಕೊಂಗೆಪAಡ ನಿತಿನ್,

(ಮೊದಲ ಪುಟದಿಂದ) ಬೆಸ್ಟ್ ಬೌಲರ್ ಆಗಿ ಪಂದಿಕAಡ ಶ್ರೇಯಸ್ ಪ್ರಶಸ್ತಿ ಪಡೆದುಕೊಂಡರು.

ಥ್ರೋ ಬಾಲ್ : ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಬಿಟ್ಟಂಗಾಲ ತಂಡ, ಪಾರಾಣೆ ತಂಡದ ವಿರುದ್ಧ ಜಯ ಸಾಧಿಸಿ ವಿನ್ನರ್ಸ್ ಸ್ಥಾನ ಪಡೆದುಕೊಂಡರೆ, ಪಾರಾಣೆ ತಂಡ ರನ್ನರ್ಸ್ ಆಫ್ ಸ್ಥಾನ ಪಡೆದು ಕೊಂಡಿತು.

ಹಗ್ಗ ಜಗ್ಗಾಟ : ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆಯ ಫೈನಲ್‌ನಲ್ಲಿ ಹಾಲುಗುಂದ ತಂಡ ಬೆಟ್ಟಗೇರಿ ತಂಡವನ್ನು ಸೋಲಿಸಿ ವಿಜೇತರಾದರೆ, ಗೆಲುವಿಗಾಗಿ ಉತ್ತಮ ಪ್ರಯತ್ನ ನಡೆಸಿದ ಬೆಟ್ಟಗೇರಿ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಮಹಿಳೆಯರ ಹಗ್ಗಜಗ್ಗಾಟ ಫೈನಲ್‌ನಲ್ಲಿ ಒಂಟಿಯAಗಡಿ ತಂಡ ಬೆಟ್ಟಗೇರಿ ತಂಡದ ವಿರುದ್ಧ ಜಯಸಾಧಿಸಿ ವಿನ್ನರ್ಸ್ ಸ್ಥಾನ ಪಡೆದುಕೊಂಡಿತು. ಬೆಟ್ಟಗೇರಿ ತಂಡ ರನ್ನರ್ಸ್ ಸ್ಥಾನ ಪಡೆಯಿತು.

ಜೂನಿಯರ್ ಕ್ರಿಕೆಟ್ : ಕ್ರಿಕೆಟ್ ಜೂನಿಯರ್ ವಿಭಾಗದ ಫೈನಲ್‌ನಲ್ಲಿ ಬೆಟ್ಟಗೇರಿ ತಂಡ ಹಾಲುಗುಂದ ತಂಡದ ವಿರುದ್ಧ ಜಯಗಳಿಸಿ ವಿನ್ನರ್ಸ್ ಸ್ಥಾನ ಪಡೆದುಕೊಂಡರೆ, ಹಾಲುಗುಂದ ರನ್ನರ್ಸ್ ಸ್ಥಾನ ಪಡೆದುಕೊಂಡಿತು. ಚೇತನ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದುಕೊಂಡರು.

ಸಮಾರೋಪ : ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷ ಪಡಿಞರಂಡ ಜಿ ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಾಲುಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಂದಿಕAಡ ದಿನೇಶ್ ಮಾತನಾಡಿ, ಜನಾಂಗದ ಒಗ್ಗಟ್ಟನ್ನು ಕಾಪಾಡುವುದು ಕ್ರೀಡೆಯ ಉದ್ದೇಶವಾಗಿದ್ದು, ಜನಾಂಗದ ಹೆಚ್ಚು ಹೆಚ್ಚು ಜನರು ಇಂತಹ ಕಾರ್ಯಕ್ರಮಕ್ಕೆ ಸೇರುವ ಮೂಲಕ ನಮ್ಮ ಜನಾಂಗವನ್ನು ಗುರುತಿಸಿಕೊಳ್ಳಬೇಕು ಎಂದರು. ಇದೇ ಸಂದರ್ಭ ಸಮಾಜದ ವತಿಯಿಂದ ವನ್ಯಜೀವಿ ಪಶು ವೈದ್ಯಾಧಿಕಾರಿ ಡಾ. ಮೇಘನ ಪೆಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ, ಪಿ.ಯು.ಸಿ ಮತ್ತು ಪದವಿ ಶಿಕ್ಷಣದಲ್ಲಿ ಹೆಚ್ಚು ಅಂಕ ಪಡೆದು ಪ್ರಥಮ, ದ್ವಿತೀಯ ಸ್ಥಾನ ಪಡೆದ ಹೆಗ್ಗಡೆ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದಲ್ಲಿ ಖಜಾಂಚಿ ಪಾನಿಕುಟ್ಟಿರ ಕುಟ್ಟಪ್ಪ, ನಿರ್ದೇಶಕರುಗಳಾದ ಕೊಕ್ಕೆರ ಜಗನಾಥ್, ಚರ್ಮಂಡ ಅಪ್ಪುಣು ಪೂವಯ್ಯ, ಕೊಪ್ಪಡ ಪಟ್ಟು ಪಳಂಗಪ್ಪ, ಕೊಂಗೆಪAಡ ರವಿ, ಮಳ್ಳಡ ಸುತ, ಚಳಿಯಂಡ ಕಮಲ ಉತ್ತಯ್ಯ, ಮೂರಿರ ಶಾಂತಿ, ಪುದಿಯತಂಡ ಜಾಲಿ ಬೆಳ್ಯಪ್ಪ, ಮೂರಿರ ಕುಶಾಲಪ್ಪ, ಕ್ರೀಡಾ ಸಮಿತಿ ನಿರ್ದೇಶಕರಾದ ಕೊಂಗೆಪAಡ ಕುಟ್ಟಪ್ಪ, ತೋರೆರ ವಿನೀಶ್, ಇನ್ನಿತರ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಇದ್ದರು.

ಕೊಂಗೆಪAಡ ರಾಜ ಪ್ರಾರ್ಥಿಸಿ, ಕೊಡಗು ಹೆಗ್ಗಡೆ ಸಮಾಜದ ಕಾರ್ಯದರ್ಶಿ ಪಡಿಞರಂಡ ಪ್ರಭುಕುಮಾರ್ ಸ್ವಾಗತಿಸಿ, ಉಪಾಧ್ಯಕ್ಷ ಕೊರಕುಟ್ಟಿರ ಸರಾ ಚಂಗಪ್ಪ ವಂದಿಸಿದರು. ಕ್ರೀಡಾ ಸಂಚಾಲಕ ಪಂದಿಕAಡ ನಾಗೇಶ್ ನಿರೂಪಿಸಿದರು. ತೋರೆರ ಉಮೇಶ್ ಕ್ರಿಕೆಟ್ ವೀಕ್ಷಕ ವಿವರಣೆ ನೀಡಿದರು. ಕ್ರೀಡಾಕೂಟದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ವರದಿ : ಚನ್ನನಾಯಕ