ಕಡಂಗ, ಮೇ ೫: ಕಡಂಗ ಬದ್ರಿಯಾ ಮಸೀದಿಯ ಅಧೀನದಲ್ಲಿ ನೂತನವಾಗಿ ಆರಂಭಗೊAಡ ದರ್ಸ್ ಹಾಗೂ ವಾರ್ಷಿಕ ಬದರ್ ಮೌಲೀದ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬದ್ರಿಯಾ ಮಸೀದಿಯ ಅಧ್ಯಕ್ಷ ಉಸ್ಮಾನ್ ಕೆ.ಇ. ವಹಿಸಿದ್ದರು. ಕಾರ್ಯಕ್ರಮವನ್ನು ಕೂರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಲ್ ಕೂರತ್ ಉದ್ಘಾಟಿಸಿ ದರ್ಸ್ನ ಮಹತ್ವ ಕುರಿತು ಮಾತನಾಡಿ, ದುಆ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಕೂರ್ಗ್ ಜಮಿಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ, ಬದ್ರಿಯಾ ಮಸೀದಿಯ ಮುದರಿಸ್ ಅಬ್ದುಲ್ ಸತ್ತಾರ್ ಸಖಾಫಿ, ನಾಪೋಕ್ಲು ಮಸೀದಿಯ ಮುದರಿಸ್ ಅಶ್ರಫ್ ಹಸ್ಸನಿ, ಮೊಯದ್ದೀನ್ ಮಸೀದಿಯ ಅಧ್ಯಕ್ಷ ಅಬ್ದುಲ್ಲ, ಕಾರ್ಯದರ್ಶಿ ಅಬ್ದುಲ್ ರೆಹಮಾನ್, ಬದ್ರಿಯಾ ಮಸೀದಿಯ ಕೋಶಾಧಿಕಾರಿ ಸಿ.ಎ. ರಜಾಕ್, ಉಪಾಧ್ಯಕ್ಷರಾದ ರಜಾಕ್ ರಶೀದ್, ಸಹದ್, ನೌಫಲ್, ಹಾಸಿಂ, ಸುಹೈಲ್, ಕರೀಂ, ಅರ್ಷಾದ್ ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು, ಮತ್ತಿತರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ರಾಶೀದ್ ಸ್ವಾಗತಿಸಿ, ವಂದಿಸಿದರು.

-ನೌಫಲ್