ಮುಳ್ಳೂರು, ಮೇ ೬: ‘ತಾಯಂದಿರು ಭಾರತದ ಸಂಸ್ಕೃತಿ-ಸAಸ್ಕಾರ ಪರಂಪರೆಯ ರಾಯಭಾರಿ ಗಳು’ ಎಂದು ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಪೀಠಾಧ್ಯಕ್ಷ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಅಭಿಪ್ರಾಯಪಟ್ಟರು.

ಸಮೀಪದ ಗಣಗೂರು ಗ್ರಾಮದಲ್ಲಿ ಜೀರ್ಣೋದ್ದಾರಗೊಂಡಿರುವ ೨೦೦ ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಬಸವೇಶ್ವರ ಸ್ವಾಮಿ ನೂತನ ದೇವಸ್ಥಾ ನದ ಉದ್ಘಾಟನೆ ಮತ್ತು ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ನಮ್ಮ ದೇಶ ಸಂಸ್ಕೃತಿ ಸಂಸ್ಕಾರ ಧಾರ್ಮಿಕ, ಅಧ್ಯಾತ್ಮಿಕ ಚಿಂತನೆಯುಳ್ಳ ಪರಂಪರೆಯನ್ನು ಹೊಂದಿರುವ ರಾಷ್ಟçವಾಗಿದೆ ಇಂತಹ ಸಂಸ್ಕಾರ ಸಂಸ್ಕೃತಿಯನ್ನು ತಾಯಿ ಕಲಿಸಿಕೊಡುವುದರಿಂದ ನಮ್ಮ ದೇಶದಲ್ಲಿ ತಾಯಂದಿರಿಗೆ ಪ್ರಮುಖ ಸ್ಥಾನವಿದೆ ಎಂದರು. ನಮ್ಮ ದೇಶ ವಿಜ್ಞಾನ, ತಂತ್ರಜ್ಞಾನದಲ್ಲಿ ಅಭಿವೃದ್ದಿ ಸಾಧಿಸಿದೆ ಆದರೂ ನಮ್ಮ ವಿಜ್ಞಾನಿಗಳು ಆಧ್ಯಾತ್ಮಿಕ ಧಾರ್ಮಿಕ ಚಿಂತನೆಯನ್ನು ಮೈಗೂಡಿಸಿ ಕೊಂಡಿರುವ ಮೂಲಕ ಎಷ್ಟೆ ದೊಡ್ಡ ವಿಜ್ಞಾನಿ-ಸಾಧಕರಾಗಿದ್ದರೂ ದೇಶದ ಆಧ್ಯಾತ್ಮಿಕ ಧಾರ್ಮಿಕ ಚಿಂತನೆಯನ್ನು ಮರೆತಿಲ್ಲ ಎಂದರು. ಸಮಾಜವು ಆಧು ನಿಕ ವೈಜ್ಞಾನಿಕವಾಗಿ ಬದಲಾದರೂ ಮಾನ ವೀಯ ಗುಣ, ಸಂಸ್ಕಾರ. ಸಂಸ್ಕೃತಿ, ಧಾರ್ಮಿಕ, ಆಚಾರ ವಿಚಾರಗಳು ಬದಲಾ ಗಬಾರದು ಇದರಿಂದ ಸಮಾಜವು ಸಂಸ್ಕಾರ ಗೊಳ್ಳುತ್ತದೆ ಎಂದು ಸಲಹೆ ನೀಡಿದರು.ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ನಮಗೆ ದೇಗುಲ ಗಳಲ್ಲಿ ಶಾಂತಿ ನೆಮ್ಮದಿ ಮತ್ತು ಶಾಲೆಗಳಲ್ಲಿ ಜ್ಞಾನ ಸಿಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಊರುಗಳಲ್ಲಿ ಧಾರ್ಮಿಕ ಆಚರಣೆಗೆ ದೇಗುಲ ಮಠ ಮಂದಿರಗಳಿರಬೇಕು ಮತ್ತು ಪ್ರತಿಯೊಂದು ಊರುಗಳಲ್ಲಿ ಶಾಲೆಗಳು ಇರÀಬೇಕೆಂ ದರು. ಹಿಂದೆ ನಮ್ಮ ಬಿಜೆಪಿ ಸರಕಾರ ಮಠ ಮಂದಿರಗಳ ಅಭಿವೃದ್ಧಿಗೆ ಉತ್ತೇ ಜನ ನೀಡುತಿತ್ತು. ಈಗಿನ ಕಾಂಗ್ರೆಸ್ ಸರಕಾರ ಗ್ಯಾರಂಟಿಗಳನ್ನು ಕೊಡುವುದರ ಮೂಲಕ ಖಜಾನೆಯನ್ನು ಬರಿದು ಮಾಡುತ್ತಿದೆ ಎಂದು ದೂರಿದರು.

ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಮಹಂತ ಸ್ವಾಮೀಜಿ ಮಾತನಾಡಿ, ನಾವು ವೈಜ್ಞಾನಿಕವಾಗಿ ಸಮಾಜವನ್ನು ಬೆಳೆಸುತ್ತೇವೆ ಹೊರತು ಪರಿಸರವನ್ನು ಬೆಳೆಸಲು ಹೋಗುವುದಿಲ್ಲ. ಸ್ವಾರ್ಥಕ್ಕಾಗಿ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಮರ ಗಿಡವನ್ನು ಕಡಿಯುತ್ತೇವೆ. ಇದರಿಂದ ಇಂದು ಪರಿಸರ ನಾಶವಾಗಿ ಹಿಂದೆ ಪರಿಸರದಿಂದ ಕೂಡಿದ ಕೊಡಗು ಜಿಲ್ಲೆ ಈಗ ಪರಿಸರ ನಾಶವಾಗಿ ಸರಿಯಾಗಿ ಮಳೆಯಾಗುತ್ತಿಲ್ಲ. ಧಾರ್ಮಿಕ, ಆಧ್ಯಾತ್ಮಿಕ ಚಿಂತನೆಯ ಜೊತೆಯಲ್ಲಿ ಪರಿಸರ ಉಳಿಸುವ ಚಿಂತನೆಯನ್ನು ಮೈಗೂಡಿಸಿ ಕೊಳ್ಳುವ ಅಗತ್ಯ ಇದೆ ಎಂದರು.

ಅಖಿಲ ಭಾರತ ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ವಿ. ಶಿವಪ್ಪ ಮಾತನಾಡಿ, ಧಾರ್ಮಿಕ ಕೇಂದ್ರಗಳಿAದ ನಾವು ಸಂಸ್ಕಾರ, ಸಹಬಾಳ್ವೆ, ಒಗ್ಗಟ್ಟು ಮುಂತಾದ ಮಹತ್ವವನ್ನು ಕಲಿಯಬ ಹುದು. ಈ ನಿಟ್ಟಿನಲ್ಲಿ ಪ್ರತಿಯೊಂದು ಊರುಗಳಲ್ಲಿ ಗುಡಿ ದೇಗುಲಗಳ ನಿರ್ಮಾಣವಾಗಬೇಕಿದೆ ಎಂದರು.

ಶಿರಧನಹಳ್ಳಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಸೇರಿಸುವುದರಿಂದ ಇಂಗ್ಲೀಷ್ ಭಾಷೆಯನ್ನು ಮಾತನಾಡಲು ಮಾತ್ರ ಮೀಸಲಿಡುತ್ತಾರೆ. ಆದರೆ ಗ್ರಾಮೀಣ ಪ್ರದೇಶದ ಕನ್ನಡದ ಶಾಲೆಗಳು ಸಂಸ್ಕಾರ ಸಂಸ್ಕೃತಿಯನ್ನು ಕಲಿಸಿಕೊಡುತ್ತವೆ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳಿಗೆ ಸಂಸ್ಕಾರ ಆಚಾರ ವಿಚಾರಗಳನ್ನು ಕಲಿಸಿಕೊಡಬೇಕು ಎಂದು ಪೋಷಕರಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸೋಮ ವಾರಪೇಟೆ ಎಸಿಎಫ್ ಎ.ಎ. ಗೋಪಾಲ್ ಧಾರ್ಮಿಕ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ ಅಂಕನಹಳ್ಳಿ ಮನೆಹಳ್ಳಿ ಮಠದ ಶ್ರೀ ಮಹಂತ ಶಿವಲಿಂಗ ಸ್ವಾಮೀಜಿ ಮಾತನಾಡಿದರು. ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಜಿ.ಜಿ.ಪರಮೇಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗಣಗೂರು ಗ್ರಾ.ಪಂ. ಅಧ್ಯಕ್ಷೆ ಪ್ರೇಮ, ಸದಸ್ಯ ಎಂ.ಎಸ್. ಪ್ರದೀಪ್ ಮುಂತಾದವರಿದ್ದರು

ಈ ಸಂದರ್ಭ ಗ್ರಾಮದ ವಿವಿಧ ಕ್ಷೇತ್ರದ ಸಾಧಕರನ್ನು ದೇವಾಲಯ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.