ಮಡಿಕೇರಿ, ಮೇ ೬: ಡಿವೈನ್‌ಪಾರ್ಕ್ ಟ್ರಸ್ಟ್ ಉಡುಪಿ ಸಾಲಿಗ್ರಾಮ ಇದರ ಅಂಗ ಸಂಸ್ಥೆಯಾದ ವಿವೇಕ ಜಾಗ್ರತ ಬಳಗ ಮಡಿಕೇರಿ ವತಿಯಿಂದ ಇತ್ತೀಚೆಗೆ ಮಳೆಗಾಗಿ ವರುಣ ದೀಪ ಕಾರ್ಯಕ್ರಮ ನಗರದ ಕಂಚಿ ಕಾಮಾಕ್ಷಿಯಮ್ಮ ದೇವಸ್ಥಾನದಲ್ಲಿ ೧೧ ದಿನಗಳ ಕಾಲ ನೆರವೇರಿತು.

ಜಗತ್ತಿನ ಸಕಲ ಜೀವಿಗಳ ಒಳಿತಿಗಾಗಿ ಮತ್ತು ಉತ್ತಮ ಮಳೆ-ಬೆಳೆಗಾಗಿ ಪ್ರಾರ್ಥಿಸಲಾಯಿತು. ವೀರಾಜಪೇಟೆಯ ಪ್ರಶಾಂತ ಕುಟೀರ ಚಿಕ್ಕಪೇಟೆ, ಮೂರ್ನಾಡಿನ ಅಯ್ಯಪ್ಪ ಸ್ವಾಮಿ ಮಂದಿರ, ಕುಶಾಲನಗರದ ಬಲಮುರಿ ಗಣಪತಿ ದೇವಸ್ಥಾನ, ಕೈಕೇರಿಯ ಭಗವತಿ ದೇವಸ್ಥಾನ ಮುಂತಾದ ಕಡೆಗಳಲ್ಲಿ ಕೂಡಾ ಈ ಕಾರ್ಯಕ್ರಮ ನೆರವೇರಿತು.