ಸುಂಟಿಕೊಪ್ಪ, ಮೇ ೬: ವ್ಯಕ್ತಿಯೋರ್ವ ಸಾಲಬಾಧೆಯಿಂದ ಕಾಫಿ ತೋಟದಲ್ಲಿ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಸೋಮವಾರಪೇಟೆ ಐಗೂರು ಗ್ರಾಮದ ನಿವಾಸಿ ಮಧು (೪೨) ಮೃತ ದುರ್ದೈವಿ. ಮಧ್ಯಾಹ್ನದ ವೇಳೆಗೆ ೭ನೇ ಹೊಸಕೋಟೆ ಕಲ್ಲುಕೋರೆಗೆ ತೆರಳುವ ಕಾವೇರಿ ಎಸ್ಟೇಟ್ ಸಮೀಪದ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ತೋಟದ ಮಧ್ಯೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಸಾಲಬಾಧೆ ಕಾರಣವೆನ್ನಲಾಗಿದೆ.

ಮೃತನ ಪತ್ನಿ ಸೌಮ್ಯ ಸುಂಟಿಕೊಪ್ಪ ಪೊಲೀಸರಿಗೆ ದೂರು ನೀಡಿದ್ದು, ಮೊಕದ್ದಮೆ ದಾಖಲಿಸಿಕೊಂಡ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆಯು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ನಡೆಸಿ ಕುಟುಂಬ ಸ್ಥರಿಗೆ ಹಸ್ತಾಂತರಿ ಸಲಾಯಿತು. ಮೃತರು ಓರ್ವ ಪತ್ನಿ ಹಾಗೂ ಓರ್ವ ಪುತ್ರನನ್ನು ಆಗಲಿದ್ದಾರೆ.