ಸೋಮವಾರಪೇಟೆ, ಮೇ ೫: ಪಟ್ಟಣದ ರೇಂಜರ್ ಬ್ಲಾಕ್ನಲ್ಲಿರುವ ಶ್ರೀ ವನದುರ್ಗಿ ದೇವಾಲಯದಲ್ಲಿ ವಾರ್ಷಿಕ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ದೇವಾಲಯ ಪ್ರಾಂಗಣದಲ್ಲಿರುವ ಶ್ರೀ ವನದುರ್ಗಿ, ಚೌಡಿ ಹಾಗೂ ಗುಳಿಗ ದೇವರುಗಳಿಗೆ ವಿಶೇಷ ಪೂಜೆಗಳು ನಡೆದವು. ಅರ್ಚಕ ಸುರೇಶ್ ಭಟ್ ಪೌರೋಹಿತ್ವದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು.
ಮಧ್ಯಾಹ್ನ ಮಹಾಮಂಗಳಾರತಿ ನಂತರ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಮಂದಿ ಭಕ್ತಾದಿಗಳು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು. ದೇವಾಲಯ ಸಮಿತಿಯ ಅಧ್ಯಕ್ಷ ವಿಜಯ್, ಕಾರ್ಯದರ್ಶಿ ಶಿವಪ್ರಸಾದ್, ಖಜಾಂಚಿ ಯತೀಶ್, ಪದಾಧಿಕಾರಿಗಳಾದ ಅನಿಲ್, ಗಿರೀಶ್, ಶಿವಕುಮಾರ್, ವಿನಾಯಕ್, ಸುಧಾಕರ್, ಅನಿಲ್ ಶೆಟ್ಟಿ, ರಮೇಶ್, ಶರತ್ಚಂದ್ರ, ಅಜಯ್, ಅಶೋಕ್ ಸೇರಿದಂತೆ ಇತರರು ಪೂಜಾ ಕಾರ್ಯದ ಉಸ್ತುವಾರಿ ವಹಿಸಿದ್ದರು.