ಸುಂಟಿಕೊಪ್ಪ, ಮೇ ೫: ಸುಂಟಿಕೊಪ್ಪ ವೃಕ್ಷೆÆÃದ್ಭವ ಶಕ್ತಿ ಗಣಪತಿ ದೇವಸ್ಥಾನದ ೨೦೨೪-೨೫ನೇ ಸಾಲಿನ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷರಾಗಿ ಎಂ. ಮಂಜುನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಬಿ.ವಿ. ಸುನೀಲ್ ಕುಮಾರ್ (ಸ್ವಾಗತ್) ಆಯ್ಕೆಯಾಗಿದ್ದಾರೆ. ಗುರುವಾರದಂದು ಸಂಜೆ ಸುಂಟಿಕೊಪ್ಪ ಮಧುರಮ್ಮ ಬಡಾವಣೆಯ ವೃಕ್ಷೆÆÃದ್ಭವ ಗಣಪತಿ ದೇವಸ್ಥಾನದ ಆವರಣದಲ್ಲಿ ರಮೇಶ್‌ಶೇಟ್ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಸಮಿತಿ ರಚನೆಯಾಯಿತು. ವಾರ್ಷಿಕೋತ್ಸವ ಸಮಿತಿಯ ಉಪಾಧ್ಯಕ್ಷರಾಗಿ ಪುಳಂಜನ ಕುಶಾಲಪ್ಪ, ಸಹಕಾರ್ಯದರ್ಶಿಯಾಗಿ ಶಿವರಾಮನ್, ಸಂಘಟನಾ ಕಾರ್ಯದರ್ಶಿಯಾಗಿ ನಿಖಿಲ್ ಹರೀಶ್, ಖಜಾಂಚಿಯಾಗಿ ಬಿ.ಎಸ್. ರಮೇಶ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಎ. ಶ್ರೀಧರ್‌ಕುಮಾರ್, ಮಹೇಶ್ ರೈ, ದಿವಾಕರ್ ಪೂಜಾರಿ, ದಿವಾಕರ್ ರೈ, ಕೆ.ಎನ್. ಪವಿ, ಬಿ.ಎಂ. ಸುರೇಶ್, ಸುರೇಶ್‌ಗೋಪಿ, ಲೋಕೇಶ್ (ಲೋಕಿ), ಮಣಿಕಂಠ (ಮುನಿಯ), ಸುರೇಶ್ ಚಂದು, ಕಿಶೋರ್, ಬಿ.ಆರ್. ಸತೀಶ್, ವಿ.ಕೆ. ರಾಜ ಆಯ್ಕೆಯಾದರು.

ಈ ಸಂದರ್ಭ ಟ್ರಸ್ಟಿ ಕೆ. ಸುರೇಶ್ ಕುಮಾರ್, ಬಿ.ಎಸ್. ಸದಾಶಿವ ರೈ, ಮಾಜಿ ಅಧ್ಯಕ್ಷ ರಮೇಶ್ ಶೇಟ್ ಉಪಸ್ಥಿತರಿದ್ದರು.