ಸಿದ್ದಾಪುರ, ಮೇ ೬: ಚೆನ್ನಂಗಿ ಗೂಡ್ಲೂರು ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ೧೭ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮಗಳು ವಿವಿಧ ಪೂಜಾ ಕೈಂಕರ್ಯಗಳೊAದಿಗೆ ತಾ. ೮ ಹಾಗೂ ೯ ರಂದು ನಡೆಯಲಿವೆ.

ತಾ. ೮ ರಂದು ಸಂಜೆ ೬ ಗಂಟೆಗೆ ಬಿಳಿಗೇರಿಯ ಉದಯಕುಮಾರ್ ತಂತ್ರಿಗಳ ನೇತೃತ್ವದಲ್ಲಿ ಪಂಚಗವ್ಯ, ಸ್ಥಳ ಶುದ್ಧಿ, ಪುಣ್ಯಾಹ, ಪ್ರಾರ್ಥನೆ, ಗಣಪತಿ ಹೋಮ, ದುರ್ಗಾಪೂಜೆ, ಮಹಾಪೂಜೆ, ತೀರ್ಥಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ.

ತಾ. ೯ ರಂದು ಬೆಳಿಗ್ಗೆ ೯ ಗಂಟೆಗೆ ಗಣಪತಿ ಹೋಮ, ನವಕ ಕಲಶ, ರುದ್ರಾಭಿಷೇಕ, ನಾಗತಂಬಿಲ, ೧೧ ಗಂಟೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.