ಮಡಿಕೇರಿ, ಮೇ ೭: ೨ನೇ ಮೊಣ್ಣಂಗೇರಿ ಗ್ರಾಮದಲ್ಲಿ ಗ್ರಾಮಸ್ಥರ ನೆರವಿನೊಂದಿಗೆ ಐತಿಹಾಸಿಕವಾಗಿ ಗುರುತಿಸಿಕೊಂಡಿರುವ ಕುಡಿಯ ಹಾರಿದ ಕಲ್ಲಿನ ಬಳಿ ರೂ. ೨೦ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಾಜರಾಜೇಶ್ವರಿ ಭಜನಾ ಮಂದಿರಕ್ಕೆ ಮಡಿಕೇರಿ ಶ್ರೀ ರಾಮಾಂಜನೇಯ ಭಜನಾ ಮಂಡಳಿ, ಆರೋಹಣ ಕೊಡಗು ತಂಡ ಮತ್ತು ಭಾರತೀಯ ವಿದ್ಯಾಭವನದ ಯೋಗ ಭಾರತಿಯ ಸದಸ್ಯರು ರೂ. ೨ ಲಕ್ಷದ ೩೩ ಸಾವಿರ ಹಣದ ನೆರವನ್ನು ನೀಡಿದರು.