ಐಗೂರು, ಮೇ ೭: ತಾ. ೧೧ ಮತ್ತು ೧೨ ರಂದು ಕೇರಳದ ಕ್ಯಾಲಿಕಟ್‌ನಲ್ಲಿ ನಡೆಯುವ ಅಂರ‍್ರಾಷ್ಟಿçÃಯ ಶೋಟೊ ಖಾನ್ ಕರಾಟೆ ಪಂದ್ಯಾವಳಿಗೆ ಆಯ್ಕೆಯಾದ ೧೪ ಜನ ವಿದ್ಯಾರ್ಥಿಗಳಿಗೆ ಐಗೂರಿನ ಕೃಷಿ ಸಂಘದ ಕಟ್ಟಡದಲ್ಲಿ ಮುಖ್ಯ ಶಿಕ್ಷಕ ಸುದರ್ಶನ್ ನೇತೃತ್ವದಲ್ಲಿ ತರಬೇತಿ ಶಿಬಿರ ನಡೆಯುತ್ತಿದೆ.

ಆಯ್ಕೆಯಾದ ೧೪ ಜನ ವಿದ್ಯಾರ್ಥಿಗಳಿಗೆ ಐಗೂರಿನ ಕೃಷಿ ಸಂಘದ ಕಟ್ಟಡದಲ್ಲಿ ಮುಖ್ಯ ಶಿಕ್ಷಕ ಸುದರ್ಶನ್ ನೇತೃತ್ವದಲ್ಲಿ ತರಬೇತಿ ಶಿಬಿರ ನಡೆಯುತ್ತಿದೆ.

ಈ ತರಬೇತಿ ಶಿಬಿರದಲ್ಲಿ ಹೆಚ್ಚಿನ ತರಬೇತಿ ನೀಡಲು ಮಂಗಳೂರಿನಿAದ ನುರಿತ ಕರಾಟೆ ಶಿಕ್ಷಕರಾದ ಟಿ.ಎಸ್.ಕೆ. ಜಪಾನ್ ಶೋಟೋ ಖಾನ್ ಕರಾಟೆಯ ಮುಖ್ಯ ಶಿಕ್ಷಕ ನಿತಿನ್ ಎನ್. ಸುವರ್ಣ, ಆತೀಶ್ ಶೆಟ್ಟಿ, ಅವನಿ ಎಂ. ಮತ್ತು ಹನ್ಸಿ ಎಂ., ಇವರುಗಳು ಭೇಟಿ ನೀಡಿದ್ದರು. ಈ ತರಬೇತಿ ಶಿಬಿರದಲ್ಲಿ ಕಾಂತಾರ ಚಿತ್ರದಲ್ಲಿ ನಟಿಸಿದ ಬಾಲ ನಟ ಆತೀಶ್ ಶೆಟ್ಟಿ ಕೂಡ ಭಾಗವಹಿಸಿದ್ದರು.