ಮಡಿಕೇರಿ, ಮೇ ೮: ಶತ್ರುಗಳ ದಾಳಿಗೆ ಅಂಜದೇ ಕೆಚ್ಚೆದೆಯಿಂದ ಹೋರಾಡಿ ನಾಡನ್ನು ರಕ್ಷಿಸಿದ ಪಡೆಭೀರರ ನೆನಪಿನಲ್ಲಿ ಸೂರ್ಲಬ್ಬಿ ನಾಡಿನ ಮಧ್ಯಭಾಗದಲ್ಲಿರುವ ಬೀರಂಗೊಡದಲ್ಲಿ ಅದ್ದೂರಿಯಾಗಿ ಭೀರನಮ್ಮೆ ನಡೆಯಿತು.

ಪ್ರತಿ ಹನ್ನೆರಡು ವರ್ಷಗಳಿ ಗೊಮ್ಮೆ ನಡೆಯುವ ಈ ಉತ್ಸವವು ನಾಡಿಗಾಗಿ ಮಡಿದ ನೂರಾರು ಪಡೆಭೀರರಿಗೆ ಎಡೆ ಇಟ್ಟು ಶ್ರದ್ಧಾ ಭಕ್ತಿಯಿಂದ ಸಂಪ್ರದಾಯ ಬದ್ಧವಾಗಿ ಆಚರಿಸಲ್ಪಡುತ್ತದೆ.

ಪುರಾತನ ಕಾಲದಿಂದಲೂ ಶೂರತನಕ್ಕೆ ಹೆಸರುವಾಸಿಯಾಗಿರುವ ಸೂರ್ಲಬ್ಬಿಯ ಅಂಜಿಕೇರಿ (ಚೂರೆಬ್ಬಿ, ಮುಟ್ಟ, ಕುಂಬಡಿ, ಮಕ್ಕೇತ್, ಕ್‌ಕ್ಕಳ್ಳಿ)ಯ ಗ್ರಾಮಸ್ಥರು ಸೇರಿ ಈ ಹಬ್ಬವನ್ನು ಆಚರಿಸುತ್ತಾರೆ.

ನಾಡಿನ ಅಸ್ತಿತ್ವವನ್ನೇ ಅಳಿಸಲು ಬಂದ ಟಿಪ್ಪುವಿನ ಕಳ್ಳಪಡೆಯನ್ನ ಕಂಡು ಯುದ್ಧದ ಮಾಹಿತಿ ಇಲ್ಲದ ತಮ್ಮಷ್ಟಕ್ಕೆ ತಾವಿದ್ದ ಗ್ರಾಮಸ್ಥರು ದಿಗ್ಬಾçಂತರಾಗುತ್ತಾರೆ. ಎದುರಿಗಿದ್ದ, ಮುದ್ದಂಡ, ತಂಬುಕುತ್ತಿರ ಮತ್ತು ಐರಿರ ತಲಾ ಒಬ್ಬರು ಅಜ್ಜಂದಿರು ಕೈಗೆ ಸಿಕ್ಕ ತೆಂಗಿನಕಾಯಿ, ಬಾಳೆಗೊನೆ ಯೊಂದಿಗೆ ನಾಡಿನ ರಕ್ಷಕ ಕೇತ್ರಪ್ಪನ ಸನ್ನಿಧಿಗೆ ಓಡಿ "ಕೇತ್ರಪ್ಪ ಹರೋ ಕೂ...." ಕೂಗುತ್ತಾ ದೇವರಲ್ಲಿ ರಕ್ಷಣೆಗಾಗಿ ಗೋಗರೆಯುತ್ತಾರೆ. ನೋಡನೋಡುತ್ತಿ ದ್ದಂತೆ ಕ್ಷೇತ್ರಪ್ಪನ ಸನ್ನಿಧಾನದಿಂದ ಹೆಜ್ಜೇನಿನ ಹಿಂಡೊAದು ಹಾರಿ ಬಂದು ಶತ್ರು ಪಡೆಯ ಮೇಲೆರಗುತ್ತವೆ. ಇದೇ ಸಂದರ್ಭದಲ್ಲಿ ನಾಡಿನ ಯೋಧರೂ ಶತ್ರುಗಳ ಮೇಲೆ ಮುಗಿಬೀಳುತ್ತಾರೆ. ಹಠಾತ್ ಆಗಿ ಧಾಳಿಯಾದ್ದರಿಂದ ಬೆಚ್ಚಿದ ಶತ್ರುಪಡೆ, ಪ್ರತಿಧಾಳಿ ತಾಳಲಾರದೆ ಸಮೀಪವಿದ್ದ ಕೂವಳೆಗೆ ಹಾರುತ್ತಾರೆ. ಅಲ್ಲಿ ಸಾವಿರಾರು ಶತ್ರುಗಳು ಅಳಿಯುತ್ತಾರೆ. ಹಾಗೆ ಹಾರಿದ ಜಾಗವನ್ನು "ಬಡ್ಸತ್ತ ಕುಂಡ್"(ಬಡುವ ಸತ್ತ್ ಗುಂಡಿ) ಎಂದು ಕರೆಯಲಾಗುತ್ತದೆ. ಸತ್ತ ಶತ್ರುಗಳ ಆಯುಧಗಳನ್ನ, ಕ್ಷೇತ್ರಪ್ಪನಿಗೆ ಭಂಡಾರವಾಗಿ ಅರ್ಪಿಸಲಾಗಿದೆ. ಇಂದಿಗೂ ವಾರ್ಷಿಕ ಉತ್ಸವದಲ್ಲಿ ಆಯುಧಗಳನ್ನ ಹೊರತೆಗೆದು ನಾಡಿನವರು ಬೊಳಕಾಟಿನ ಮೂಲಕ ಪ್ರದರ್ಶಿಸುತ್ತಾರೆ. ಈ ಮಹಾ ಯುದ್ದದಲ್ಲಿ ಮಡಿದ, ಪುರುಷ, ಮಹಿಳೆ, ಮಕ್ಕಳಾದಿಯಾಗಿ ಭೀರರ ನೆನಪಿನಲ್ಲಿ, ಇತರ ಪಡೆಗಳಲ್ಲಿ, ಕಾಡು ಪ್ರಾಣಿಗಳೊಂದಿಗೆ ಸೆಣಸಿ, ನಾಡಿಗಾಗಿ ಮಡಿದ ವೀರರ ನೆನಪಿನಲ್ಲಿ, ನಂತರದ ದಿನಗಳಲ್ಲಿ ಬೀರಕಲ್ಲುಗಳನ್ನ ನೆಟ್ಟು ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಭೀರನಮ್ಮೆಯಾಗಿ ಆಚರಿಸಲಾಗತ್ತದೆ. ಅಲ್ಲದೆ ಪ್ರತಿ ಕೈಲ್‌ಪೊಳ್ದ್ ನಮ್ಮೆಯಲ್ಲಿಯೂ ಇಲ್ಲಿ ಮೀದಿ ನೀರ್ ಇಡಲಾಗುತ್ತದೆ.

ಇಲ್ಲಿ ಮುದ್ದಂಡ, ತಂಬುಕುತ್ತಿರ, ಓಡಿಯಂಡ ಮತ್ತು ಐರಿ ಕುಟುಂಬಗಳು ಮುಕ್ಕಾಟಿಯರಾಗಿ ಕಾರ್ಯನಿರ್ವಹಿಸುವುದು, ದೇವರನ್ನು ಬೇಡಿ ನಾಡನ್ನು ಕಾಪಾಡಿದಕ್ಕಾಗಿ ಆ ಕುಟುಂಬಗಳಿಗೆ ಸಲ್ಲುವ ಗೌರವ ವಾಗಿದೆ. ಪುರಾತನ ಕಾಲದಿಂದಲೂ ಕಾಡು ಬೇಟೆಯಾಡಿ ನೈವೇದ್ಯ ಅರ್ಪಿಸಲಾಗುತಿತ್ತಾದರೂ ಕಾನೂನಿನ ದೃಷ್ಟಿಯಿಂದ ಕೇವಲ ಸಾಂಪ್ರದಾಯಿಕ ಆಚರಣೆಯಷ್ಟೇ ನಡೆಯುತ್ತಿದೆ.

ಎತ್ತ್ ಪೋರಾಟದೊಂದಿಗೆ, ದುಡಿಕೊಟ್ಟ್ಪಾಟ್‌ನೊಂದಿಗೆ ಭೀರಂಗೊಡಕ್ಕೆ ಬಂದು, ಮುದ್ದಂಡ, ಓಡಿಯಂಡ, ತಂಬುಕುತ್ತಿರ ಮತ್ತು ಐರಿರ ಕುಟುಂಬದಿAದ, ಅಕ್ಕಿ, ತೆಂಗಿನಕಾಯಿ, ಬಾಳೆ, ಅಕ್ಕಿಪುಡಿ ಯನ್ನು ತಂದು ನೈವೇದ್ಯ ತಯಾರಿಸಿ, ಪ್ರತಿ ಭೀರಂಗಲ್ಲಿಗೂ ನೈವೇದ್ಯ ಸಮರ್ಪಿಸಲಾಗುತ್ತದೆ. ಮುದ್ದಂಡ ಕುಟುಂಬ ಆಚರಣೆಯ ಪ್ರಮುಖ ಜವಾಬ್ದಾರಿಯನ್ನು ನಿಭಾಯಿಸುತ್ತದೆ. ಈ ನಾಲ್ಕೂ ಕುಟುಂಬದ ತಲಾ ಒಬ್ಬರು ಸಾಂಪ್ರದಾಯಿಕ ಉಡುಪಿನಲ್ಲಿ ಭರ್ಚಿಯನ್ನು ಹಿಡಿದು, "ಪಡೆ ಬಾತ್... ಪಡೆ ಬಾತ್.... ಪಡೆ ಬಾತ್. ಪಡೆ ಬಂತ್ಲೆ... ಪಡೆ ಬಂತ್ಲೆ... ಪಡೆ ಬಂತ್ಲೆ..."(ಶತ್ರು ಪಡೆ ಬಂತು, ಶತ್ರು ಪಡೆ ಬಂದಿಲ್ಲ) ಎಂದು ಉದ್ಗರಿಸುತ್ತ ನಿಂತಲ್ಲಿಯೇ ಮುಮ್ಮುಖ, ಹಿಮ್ಮುಖವಾಗಿ ಜಿಗಿಯುವುದು ಸಂಪ್ರದಾಯದ ಹಿನ್ನೆಲೆಗೆ ಸಾಕ್ಷಿಯಾಗಿದೆ.