ಮಡಿಕೇರಿ, ಮೇ ೮: ಕರುನಾಡ ಕನ್ನಡ ಕಲಾಸಿರಿ ಬಳಗ ಬೆಂಗಳೂರು, ಇವರ ವತಿಯಿಂದ ಕನ್ನಡ ಭಾಷೆಯಲ್ಲಿ ವಿದ್ಯಾರ್ಥಿಗಳು ೧೦೦/೧೦೦ ಅಂಕಗಳಿಸಲು ಕಾರಣರಾದ ಶಿಕ್ಷಕರಿಗೆ ನೀಡುವ ಉತ್ತಮ ಶಿಕ್ಷಕ ಪ್ರಶಸ್ತಿಗೆ ಕದನೂರು ಕೆ. ಬೋಯಿಕೇರಿ ಗ್ರಾಮದ ವಸಂತ ಪಿ.ಎಸ್. ಮತ್ತು ಶಿವಮ್ಮ ದಂಪತಿಯ ಪುತ್ರಿ ಶುಶ್ಮಿತಾ ಪಿ.ವಿ. ಆಯ್ಕೆಯಾಗಿದ್ದಾರೆ. ಇವರು ಸಿ.ಐ.ಟಿ. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿಸುತ್ತಿದ್ದಾರೆ.