ಮಡಿಕೇರಿ, ಮೇ ೮: ಮಾದಾಪುರ ಜಂಬೂರಿನ ಎಫ್.ಎಂ.ಸಿ. ಬಡಾವಣೆಯಲ್ಲಿ ತಾ. ೧೨ ರಂದು ಹರಕೆಕೋಲ ನಡೆಯಲಿದೆ. ಅಂದು ರಾತ್ರಿ ೭.೩೦ಕ್ಕೆ ಭಂಡಾರ ಇಳಿಸುವುದು, ೮ ಗಂಟೆಗೆ ಎಣ್ಣೆ ಬುಳ್ಯ ಕೊಡುವುದು, ೮.೩೦ಕ್ಕೆ ಅನ್ನದಾನ, ೯ ಗಂಟೆಗೆ ಪಾಷಾಣಮೂರ್ತಿ ದೈವದ ನೇಮ, ಮರುದಿನ ಮುಂಜಾನೆ ೨.೩೦ಕ್ಕೆ ಕೊರಗಜ್ಜನ ನೇಮ ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆಯಲಿದೆ.