ಶನಿವಾರಸಂತೆ, ಮೇ ೮: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಸಮೀಪದ ಚಂಗಡಹಳ್ಳಿ ಮುಖ್ಯರಸ್ತೆಯಲ್ಲಿ ಕೇರಳಾಪುರ ಹೊಟೇಲ್ ಕಟ್ಟಡದ ಮಹಾಲಕ್ಷಿö್ಮÃ ಸೋಲಾರ್ ಮತ್ತು ಹೋಂ ಅಪ್ಲಯನ್ಸ್ಸ್ ಅಂಗಡಿಗೆ ಸೋಮವಾರ ರಾತ್ರಿ ನುಗ್ಗಿದ ಕಳ್ಳರು ರೂ. ೧.೨೫ ಲಕ್ಷ ನಗದು ಹಾಗೂ ಅಂಗಡಿಗೆ ಅಳವಡಿಸಿದ್ದ ಸಿಸಿ ಕ್ಯಾಮೆರಾ ಸಲಕರಣೆಗಳನ್ನು ಕಳವು ಮಾಡಿದ್ದಾರೆ.

ಅಂಗಡಿ ಮಾಲೀಕ ಪ್ರತಾಪ್ ಅವರ ಸ್ನೇಹಿತ ಮಂಜುನಾಥ್ ಮಂಗಳವಾರ ಬೆಳಿಗ್ಗೆ ಅಂಗಡಿಯ ಬಾಗಿಲು ಒಡೆದಿರುವುದನ್ನು ಗಮನಿಸಿ ತಕ್ಷಣ ಮಾಲೀಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಪ್ರತಾಪ್ ಪೊಲೀಸ್ ಠಾಣೆಗೆ ಕಳ್ಳತನದ ವಿಷಯ ತಿಳಿಸಿದ್ದಾರೆ. ಶನಿವಾರಸಂತೆ ಠಾಣೆಯ ಪೊಲೀಸರು ಅಂಗಡಿಗೆ ಬಂದು ಪರಿಶೀಲಿಸಿದಾಗ ನಗದು ಹಾಗೂ ಸಿಸಿ ಕ್ಯಾಮೆರಾ ಸಲಕರಣೆಗಳು ಕಳುವಾಗಿರುವುದು ಕಂಡುಬAದಿದೆ. ಘಟನಾ ಸ್ಥಳಕ್ಕೆ ಅಪರಾಧ ತನಿಖಾಧಿಕಾರಿ ಶ್ರೀನಿವಾಸ್, ರಾಮಕೃಷ್ಣ ಹಾಗೂ ಸಂತೋಷ್ ಭೇಟಿ ನೀಡಿದ್ದು, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.