ನಾಪೋಕ್ಲು, ಮೇ ೯: ನಾಪೋಕ್ಲು ವ್ಯಾಪ್ತಿಯಲ್ಲಿ ಬುಧವಾರ ಮತ್ತು ಗುರುವಾರ ಸುರಿದ ಭಾರೀ ಗಾಳಿ ಮಳೆಗೆ ಹಲವಡೆ ಹಾನಿ ಸಂಭವಿಸಿದೆ. ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದ್ದು ಪಟ್ಟಣದಲ್ಲಿ ಹಲವರ ಮನೆಗಳಿಗೆ ನೀರು ನುಗ್ಗಿದೆ. ಚರಂಡಿಗಳ ವ್ಯವಸ್ಥೆ ಇಲ್ಲದೆ ಇದ್ದುದರಿಂದ ಹಲವರು ಪರಿತಪಿಸಿದ ಘಟನೆ ನಡೆದಿದೆ.

ಗಾಳಿ ಮಳೆಗೆ ಮರದ ರೆಂಬೆಗಳು ಮುರಿದುಬಿದ್ದಿವೆ. ಕೆಲವು ಭಾಗಗಳಲ್ಲಿ ವಿದ್ಯುತ್ ಕಂಬಗಳು ತುಂಡಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಇಲ್ಲಿಗೆ ಸಮೀಪದ ಚೆರಿಯಪರಂಬು ನಿವಾಸಿ ಪಿ.ಎ. ಹುಸೈನಾರ್ ಎಂಬವರ ಮನೆಯ ಮೇಲ್ಚಾವಣಿಗೆ ಅಳವಡಿಸಲಾದ ಹತ್ತಕ್ಕೂ ಹೆಚ್ಚಿನ ಸಿಮೆಂಟ್ ಶೀಟುಗಳು ಗಾಳಿ ಮಳೆಗೆ ಹಾರಿ ಹೋಗಿ ನಷ್ಟ ಸಂಭವಿಸಿದ್ದು, ಸ್ಥಳಕ್ಕೆ ಕಂದಾಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದರು.

ಇಲ್ಲಿಯ ಪೊಲೀಸ್ ಠಾಣೆಯ ಸಮೀಪ ಮೈದಾನದಲ್ಲಿ ನಿಲ್ಲಿಸಲಾದ ಆಟೋ ರಿಕ್ಷಾ ಒಂದರ ಮೇಲೆ ಮರದ ಕೊಂಬೆ ಮುರಿದು ನಷ್ಟ ಸಂಭವಿಸಿದೆ.

ಭಾಗಮAಡಲ ಫೀಡರ್‌ನಲ್ಲಿ ಒಂದು ಕಂಬಕ್ಕೆ ಹಾನಿಯಾಗಿದ್ದರೆ, ಹೊದ್ದೂರು ಘಟಕದ ಮೂರು ಹೆಚ್ ಟಿ ಕಂಬಗಳಿಗೆ ಹಾನಿಯಾಗಿದೆ. ಬಲಮುರಿಯಲ್ಲಿ ಒಂದು ವಿದ್ಯುತ್ ಕಂಬ ತುಂಡಾಗಿ ಬಿದ್ದಿದೆ. ಗ್ರಾಮೀಣ ಪ್ರದೇಶಗಳ ಹಲವೆಡೆ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿತ್ತು. ಬಳಿಕ ವಿದ್ಯುತ್ ಇಲಾಖೆ ಸಿಬ್ಬಂದಿಗಳು ಸತತ ಪ್ರಯತ್ನದಿಂದ ವಿದ್ಯುತ್ ಸಂಪರ್ಕವನ್ನು ಸರಿ ಮಾಡಿದರು. ಗುರುವಾರದ ಮಳೆಗೆ ನಾಡ ಕಚೆೆÃರಿ, ಪೊಲೀಸ್ ವಸತಿ ಗೃಹದ ಸಮೀಪವಿರುವ ಬೀಟೆಮರ ಕೊಂಬೆ ಮುರಿದು ಬಿದ್ದು ರಸ್ತೆ ಸಂಪರ್ಕಕ್ಕೆ ಅಡಚಣೆ ಉಂಟಾಯಿತು. -ದುಗ್ಗಳ ಮೂರ್ನಾಡು, ಮೇ ೯: ಇಲ್ಲಿಗೆ ಸಮೀಪದ ಬೇತ್ರಿ ಕಿಗ್ಗಾಲು ಗ್ರಾಮೀಣ ಸಂಪರ್ಕ ರಸ್ತೆಯಲ್ಲಿ ಇಂದು ಸುರಿದ ಮಳೆ ಹಾಗೂ ಗಾಳಿಯಿಂದಾಗಿ ಬೇತ್ರಿ ಸಮೀಪ ಮರ ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಯಿತು. ಮರ ಬಿದ್ದ ರಭಸಕ್ಕೆ ವಿದ್ಯುತ್ ತಂತಿಗಳು ಬಾಗಿ ವಿದ್ಯುತ್ ಅಡಚಣೆ ಉಂಟಾಯಿತು.