ಗೋಣಿಕೊಪ್ಪಲು, ಮೇ ೯: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾತ್ಮಕ ವೀಡಿಯೋ, ಫೋಟೋ ಹರಿಬಿಟ್ಟ ಆರೋಪದಡಿ ಶ್ರೀಮಂಗಲ ಪೊಲೀಸರು ವ್ಯಕ್ತಿ ವಿರುದ್ಧ ಸ್ವಯಂಪ್ರೇರಿತ (ಸುಮೋಟೊ) ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾ. ೭ ರಂದು ಸಂಜೆ ಸುಮಾರು ೬-೪೯ ರ ಸಮಯದಲ್ಲಿ ಏoಜಚಿgu issues & Suggesಣioಟಿs ಎಂಬ ವ್ಯಾಟ್ಸಾಪ್ ಗ್ರೂಪಿನ ಸದಸ್ಯ ಸಿ. ವಿವೇಕ್ ಕಾರ್ಯಪ್ಪ ಎಂಬ ವ್ಯಕ್ತಿ ಹಳೆಯ ವೀಡಿಯೋ ಒಂದನ್ನು ಪೋಸ್ಟ್ ಮಾಡಿ ವೀಡಿಯೋದಲ್ಲಿರುವ ವ್ಯಕ್ತಿಯ ಹೆಸರು ಮೊಹಮ್ಮದ್ ಮುಜಾಹಿದ್ ಇಸ್ಲಾಂ ಈತ ಕೇರಳ ಕಾಂಗ್ರೆಸ್‌ನ ಮಾಧ್ಯಮ ಉಸ್ತುವಾರಿ ರಾಹುಲ್ ಗಾಂಧಿ ಗೆಲುವಿಗಾಗಿ ಗೋವನ್ನು ಗುಂಡಿಟ್ಟು ಬಲಿ ಕೊಟ್ಟಿದ್ದು ಹಿಂದೂಗಳ ಮೇಲಿನ ದ್ವೇಷದ ಪರಮಾವಧಿ ಎಂದು ಸಂದೇಶ ಹಾಕಿದ್ದಾನೆ.

ಸಾಮಾಜಿಕ ಜಾಲತಾಣದ ಬಗ್ಗೆ ನಿಗಾ ವಹಿಸಿರುವ ಪೊಲೀಸ್ ತಂಡ ಶ್ರೀಮಂಗಲ ಠಾಣೆಯಲ್ಲಿ ಸ್ವಯಂ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದೆ. ಕೆಲವು ದಿನಗಳ ಹಿಂದೆ ಕೊಡಗು ಪೊಲೀಸರು ಪ್ರಕಟಣೆ ಮೂಲಕ ಸುಳ್ಳು ಸಂದೇಶ ಹಾಕುವವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದರು.