ಕಣಿವೆ, ಮೇ ೧೦: ಗುರುವಾರ ರಾತ್ರಿ ಸುರಿದ ಮಳೆಗೆ ಗುಡ್ಡೆಹೊಸೂರು ಬಳಿಯ ಬಸವನಹಳ್ಳಿ ಗ್ರಾಮದ ಕೃಷಿಕರ ಹೊಲ ಗದ್ದೆಗಳಲ್ಲಿ ವ್ಯಾಪಕವಾದ ನೀರು ಹರಿದು ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.

ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸದಸ್ಯರೂ ಆಗಿರುವ ಬಸವನಹಳ್ಳಿ ಗ್ರಾಮದ ಕೃಷಿಕ ಪಟ್ಟು ಮಾದಪ್ಪ ಅವರಿಗೆ ಸೇರಿದ ಶುಂಠಿ ಬಿತ್ತನೆ ಮಾಡಿದ್ದ ಹೊಲದಲ್ಲಿನ ಪಾತಿಗಳ ಮೇಲೆ ಮಳೆಯ ನೀರು ಹರಿದು ಕೊಚ್ಚಿ ಹೋಗಿರುವುದಾಗಿ ಮಾದಪ್ಪ ದೂರಿದ್ದಾರೆ. ಮಳೆ ಇಲ್ಲದೇ ಕಳೆದ ಮೂರು ತಿಂಗಳಿನಿAದ ಮಳೆಗಾಗಿ ಕಾದು ಕಾದು ಬಸವಳಿದಿದ್ದ ಕೃಷಿಕರಿಗೆ ಇದೀಗ ಮಳೆ ಹಾನಿಯ ಭೀತಿ ಎದುರಾಗಿದೆ.