ಕುಶಾಲನಗರ, ಮೇ ೧೦: ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ವಾರಿಸುದಾರರಿಲ್ಲದ ವ್ಯಕ್ತಿ ಒಬ್ಬನ ಮೃತದೇಹ ಪ್ರಕರಣಕ್ಕೆ ಸಂಬAಧಿಸಿದAತೆ ಕುಶಾಲನಗರ ಪಟ್ಟಣ ಠಾಣೆಯ ಪೊಲೀಸರು ಕುಟುಂಬ ಸದಸ್ಯರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಹಲವು ದಶಕಗಳಿಂದ ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ಗ್ರಾಮಗಳಲ್ಲಿ ಓಡಾಡುತ್ತಿದ್ದ ಸೋಮ ಸುಂದರ ಎಂಬಾತ ಅನಾರೋಗ್ಯದಿಂದ ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಆದರೆ ಆತನ ಕುಟುಂಬಸ್ಥರ ಮಾಹಿತಿ ಕುಶಾಲನಗರ ಪೊಲೀಸರಿಗೆ ಲಭಿಸದೆ ಹುಡುಕಾಟದಲ್ಲಿ ತೊಡಗಿದ್ದರು.

ಕುಶಾಲನಗರ ಪಟ್ಟಣ ಠಾಣೆ ಇನ್ಸ್ಪೆಕ್ಟರ್ ಪ್ರಕಾಶ್ ಮಾರ್ಗದರ್ಶನದಲ್ಲಿ ಎಎಸ್‌ಐ ಬಸಪ್ಪ ಮತ್ತು ಸಿಬ್ಬಂದಿ ಮೃತ ವ್ಯಕ್ತಿಯ ವಾರಿಸುದಾರರ ಹುಡುಕಾಟದಲ್ಲಿ ತೊಡಗಿ ಸುಂಟಿಕೊಪ್ಪ, ಮಾದಾಪುರ ಜಿಲ್ಲೆ ಗಡಿಭಾಗದ ಸುಳ್ಯ ಮತ್ತಿತರ ಕಡೆ ಮಾಹಿತಿ ಕಲೆಹಾಕಿ ಕೊನೆಗೆ ಜಿಲ್ಲೆಯ ಗಡಿ ಭಾಗದ ಕಲ್ಲುಗುಂಡಿ ಸಮೀಪದ ದೊಡ್ಡಡ್ಕ ಗ್ರಾಮದಲ್ಲಿ ಕುಟುಂಬ ಸದಸ್ಯರು ಪತ್ತೆಯಾಗಿದ್ದಾರೆ. ಪೊಲೀಸರು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮೃತದೇಹದ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.