ಕಣಿವೆ, ಮೇ ೧೦: ಹನ್ನೆರಡನೇ ಶತಮಾನದ ಬಸವಾದಿ ಶರಣರ ವಚನಗಳು ಜನಸಮುದಾಯದ ಉತ್ತಮ ಬದುಕಿನ ದೀವಿಗೆಗಳು ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಬಣ್ಣಿಸಿದರು.

ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಹುಲುಸೆ ಗ್ರಾಮದಲ್ಲಿ ಗುರವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು ಆಧುನಿಕತೆಯ ಧಾವಂತದಲ್ಲಿ ಜನರಿಗೆ ಅತೀ ಸುಲಭದಲ್ಲಿ ಹಣ ಸಂಪಾದನೆಯಾಗುತ್ತದೆಯಾದರೂ ಆಂತರಿಕವಾದ ಸುಖ, ಸಂತೋಷ, ಶಾಂತಿ ಹಾಗೂ ನೆಮ್ಮದಿಗಳನ್ನು ನಾವು ನಮ್ಮೊಳಗೆಯೇ ಕಂಡುಕೊಳ್ಳಬೇಕು. ಹಾಗಾಗಿ ಅರ್ಪಣೆ, ಅರ್ಚನೆ ಹಾಗೂ ಅನುಭವಗಳ ಮೂಲಕ ವಚನ ಸಾಹಿತ್ಯದ ಸಾರವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ರಾಮರಾಜ್ಯದ ಪರಿಕಲ್ಪನೆ ಸಾಕಾರವಾಗುತ್ತದೆ ಎಂದು ತಿಳಿಸಿದರು.

ಬಸವ ಜಯಂತಿ ಅಂಗವಾಗಿ ಪ್ರವಚನ ನೀಡಿದ ಹೆಬ್ಬಾಲೆ ಪ್ರೌಢಶಾಲೆ ಕನ್ನಡ ಉಪನ್ಯಾಸಕ ಮೆ.ನಾ. ವೆಂಕಟನಾಯಕ್, ಮಕ್ಕಳಿಗೆ ಎಳೆಯ ಪ್ರಾಯದಿಂದಲೇ ತಾಯಂದಿರು ವಚನಗಳನ್ನು ಕಡ್ಡಾಯವಾಗಿ ಕಲಿಸುವ ಮೂಲಕ ಈ ನೆಲದ ಸಂಸ್ಕಾರಗಳನ್ನು ಕಲಿಸಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದರು.

ತಾಯAದಿರು ಮಕ್ಕಳಿಗೆ ವಚನಗಳನ್ನು ಕಲಿಸದ ಕಾರಣ ಇಂದು ಮಕ್ಕಳು ಮೊಬೈಲ್‌ಗಳ ದಾಸರಾದರೆ, ತಾಯಂದಿರು ಟಿವಿ ಧಾರಾವಾಹಿಗಳಿಗೆ ಶರಣಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ವೆಂಕಟನಾಯಕ್ ವಿಷಾದಿಸಿದರು. ಸಾಹಿತಿ ಕಣಿವೆ ಭಾರಧ್ವಾಜ್ ಮಾತನಾಡಿದರು.

ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ ಆಶಯ ನುಡಿಗ ಳಾಡಿದರು. ಜಿಲ್ಲಾ ಪರಿಸರವಾದಿ ಟಿ.ಜಿ. ಪ್ರೇಮಕುಮಾರ್, ಹಿರಿಯರಾದ ಕಾಳಪ್ಪ, ಹುಲುಸೆಯ ಕೃಷಿಕ ಸಂಪತ್ ಇದ್ದರು. ವಿದ್ಯಾರ್ಥಿನಿ ಐಶ್ವರ್ಯ ವಚನಗಳನ್ನು ಹಾಡಿದರು.