ನಾಪೋಕ್ಲು, ಮೇ ೧೦: ಮಡಿಕೇರಿ ತನಲ್ ವೃದ್ಧಾಶ್ರಮದಲ್ಲಿ ನಾಪೋಕ್ಲು ಶೌರ್ಯ ವಿಪತ್ತು ನಿರ್ವಹಣಾ ತಂಡದಿAದ ಶ್ರಮದಾನ ಮಾಡಲಾಯಿತು. ವೃದ್ಧಾಶ್ರಮದಲ್ಲಿ ಮಳೆಗಾಲದಲ್ಲಿ ಅವಶ್ಯಕವಾದ ಸೌದೆ ಸಂಗ್ರಹಿಸಿ ಇಡುವುದು ಹಾಗೂ ಪರಿಸರವನ್ನು ಸ್ವಚ್ಛಗೊಳಿಸುವುದರ ಮೂಲಕ ತಂಡದ ಸದಸ್ಯರು ನೆರವಾದರು.

ನಾಪೋಕ್ಲು ಶೌರ್ಯ ವಿಪತ್ತು ನಿರ್ವಹಣಾ ತಂಡ ವಿವಿಧ ಸಾರ್ವಜನಿಕ ಸೇವೆಯನ್ನು ಮಾಡುತ್ತ ಬರುತ್ತಿದ್ದು, ಪ್ರಸಂಸೆಗೆ ಪಾತ್ರವಾಗಿದೆ. ಈ ಸಂದರ್ಭ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸಂಯೋಜಕಿ ಬಾಳೆಯಡ ದಿವ್ಯ ಮಂದಪ್ಪ, ಶಂಕರ, ದಿಲಿಶ್, ಮಾಯಿಲಪ್ಪ, ಶರವಣ, ಶ್ಯಾಮಲಾ, ಆಶಾ, ಸುನೀತಾ ಹಾಜರಿದ್ದರು.