ಮಡಿಕೇರಿ, ಮೇ ೧೧: ಮಗನ ವಿದ್ಯಾಭ್ಯಾಸದ ಉದ್ದೇಶಕ್ಕಾಗಿ ಅಂಗಡಿಯ ಬೀರು ಲಾಕರ್‌ನಲ್ಲಿಟ್ಟಿದ್ದ ರೂ. ೧.೧೫ ಲಕ್ಷ ಸೇರಿದಂತೆ ಕ್ಯಾಶ್ ಬಾಕ್ಸ್ನಲ್ಲಿದ್ದ ರೂ. ೧೦ ಸಾವಿರ ನಗದನ್ನು ಕಳ್ಳತನ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ಮೈಸೂರು ರಸ್ತೆಯ ಶಾಂತಿನಿಕೇತನ ಬಡಾವಣೆಯ ವೆಲೆರಿಯನ್ ಲೋಬೋ ಎಂಬವರಿಗೆ ಸೇರಿದ ಅಂಗಡಿಯಲ್ಲಿ ಕೃತ್ಯ ನಡೆದಿದೆ.

ಶುಕ್ರವಾರ ರಾತ್ರಿ ೯.೩೦ಕ್ಕೆ ಅಂಗಡಿ ಮುಚ್ಚಿ ತೆರಳಿದ ಲೋಬೋ ಅವರು ಮರುದಿನ ಬೆಳಿಗ್ಗೆ ೬ ಗಂಟೆಗೆ ಎಂದಿನAತೆ ಅಂಗಡಿ ತೆರೆಯಲು ಆಗಮಿಸಿದ ಸಂದರ್ಭ ಮುಂಬಾಗಿಲಿನ ಬೀಗ ಇಲ್ಲದಿರುವುದು ಕಂಡು ಬಂದಿದೆ.ಗಾಬರಿಗೊAಡು ಅಂಗಡಿಯೊಳಗೆ ಪರಿಶೀಲಿಸಿದಾಗ ಬೀರುವಿನ ಲಾಕರ್ ಅನ್ನು ಒಡೆದು ಅದರಲ್ಲಿಟ್ಟಿದ್ದ ರೂ. ೧.೧೫ ಲಕ್ಷ, ಕ್ಯಾಶ್ ಬಾಕ್ಸ್ನಲ್ಲಿಟ್ಟಿದ್ದ ರೂ. ೧೫ ಸಾವಿರ ಹಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಇದರೊಂದಿಗೆ ಕಾರ್ಯನಿರ್ವಹಿಸದೆ ದುರಸ್ತಿಗೊಂಡಿದ್ದ ಸಿಸಿ ಕ್ಯಾಮರವನ್ನು ಕಳ್ಳ ಕದ್ದೊಯ್ದಿದ್ದಾನೆ.

ಈ ಬಗ್ಗೆ ವೆಲೆರಿಯನ್ ಲೋಬೋ ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನ ದಳ ಆಗಮಿಸಿ ಪರಿಶೀಲನೆ ನಡೆಸಿದೆ.

ಬೆಂಗಳೂರಿನಲ್ಲಿ ಇಂಜಿನಿಯರಿAಗ್ ಶಿಕ್ಷಣ ಪಡೆಯುತ್ತಿರುವ ತನ್ನ ಪುತ್ರನ ಕಾಲೇಜು ಶುಲ್ಕ ಪಾವತಿಸುವ ಉದ್ದೇಶದಿಂದ ವೆಲೆರಿಯನ್ ಲೋಬೋ ಅವರು ಶುಕ್ರವಾರದಂದು ಬ್ಯಾಂಕ್‌ನಿAದ ಹಣ ಡ್ರಾ ಮಾಡಿ ಲಾಕರ್‌ನಲ್ಲಿ ತಂದಿಟ್ಟಿದ್ದರು.