ಮಡಿಕೇರಿ, ಮೇ ೧೧: ಮೈಸೂರಿ ನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಸಭಾಂಗಣದಲ್ಲಿ ತಾ. ೧೮ ರಂದು ರೋಟರಿ ಜಿಲ್ಲೆ ೩೧೮೧ ವತಿಯಿಂದ ಜಿ-೨೦ ಯೋಗ ಶೃಂಗಸಭೆ ಆಯೋಜಿಸಲಾಗಿದೆ ಎಂದು ರೋಟರಿ ಜಿಲ್ಲಾ ಯೋಗ ಹಾಗೂ ಧ್ಯಾನ ಸಮಿತಿ ಸದಸ್ಯ ಬಿ.ಜಿ. ಅನಂತಶಯನ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಯೋಗ ಪ್ರಚಾರವು ವಿಶ್ವದೆಲ್ಲೆಡೆ ಹಾಗೂ ಎಲ್ಲಾ ವರ್ಗದಲ್ಲೂ ನಡೆಯುವ ಅವಶ್ಯಕತೆ ಇರುವುದರಿಂದ ಯೋಗ ಶಾಲಾ ಶಿಕ್ಷಕರು ಯೋಗಪಟುಗಳು ಹಾಗೂ ಆಸಕ್ತರೂ ಭಾಗವಹಿಸುವಂತೆ ಕೋರಿದರು.

ಈ ಶೃಂಗಸಭೆಯಲ್ಲಿ ಪದ್ಮಶ್ರೀ ಡಾ. ನಾಗೇಂದ್ರ, ದೇಶಿಕೇಂದ್ರ ಮಹಾಸ್ವಾಮಿಗಳು, ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಅರಳು ಮಲ್ಲಿಗೆ ಪಾರ್ಥ ಸಾರತಿ, ಆಯುಷ್ ಆಯುಕ್ತರು ಜಿ-೨೦ ದೇಶಗಳ ಪ್ರಮುಖ ನಾಯಕರು ಇತರರು ಪರದೆಯಲ್ಲಿ ಕಾಣಿಸಿ ಕೊಳ್ಳಲಿದ್ದು, ಸಭಿಕರೊಡನೆ ಸಂವಾದ ನಡೆಸಲಿದ್ದಾರೆ.

ಶೃಂಗಸಭೆಯ ಉದ್ದೇಶ ವಿಶ್ವದಲ್ಲಿ ಯೋಗವನ್ನು ಜನಪ್ರಿಯ ಗೊಳಿಸುವದು, ಯೋಗ ಕೇಂದ್ರಗಳನ್ನು ಆರಂಭಿಸುವದು, ಆರೋಗ್ಯ ಪ್ರವಾಸೋದ್ಯಮ ಉತ್ತೇಜಿಸುವದು ಆಗಿದೆ. ರೋಟರಿಯು ಅಂತರ ರಾಷ್ಟಿçÃಯ ಮಟ್ಟದಲ್ಲಿ, ಪ್ರತಿ ಜಿಲ್ಲೆಗಳಲ್ಲೂ ಯೋಗ ಶೃಂಗಸಭೆ ಏರ್ಪಡಿಸುತ್ತಿದೆ. ರೋಟರಿಯ ಸುಮಾರು ಎರಡು ಲಕ್ಷ ಕುಟುಂಬಗಳು ಪಾಲ್ಗೊಳ್ಳಗೊಳ್ಳಲಿವೆ ಎಂದು ಬಿ.ಜಿ. ಅನಂತಶಯನ ತಿಳಿಸಿದರು.

ತಾ.೧೮ರಂದು ಬೆಳಿಗ್ಗೆ ೯ ಗÀಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಯೋಗ ತಜ್ಞರು ಮತ್ತು ಅತಿಥಿಗಳು ಯೋಗ ಮತ್ತು ಧ್ಯಾನದ ಮೂಲಕ ವೈಯಕ್ತಿಕ ಸ್ವಾಸ್ಥö್ಯ ವೃತ್ತಿಪರ ಸ್ವಾಸ್ಥö್ಯ, ರಾಷ್ಟಿçÃಯ ಸ್ವಾಸ್ಥö್ಯ, ಜಾಗತಿಕ ಸ್ವಾಸ್ಥö್ಯ ಹಾಗೂ ಇತ್ಯಾದಿ ವಿಚಾರ ಮಾತನಾಡಲಿದ್ದಾರೆ. ನಡು ನಡುವೆ ಯೋಗ ಪ್ರದರ್ಶನ, ನೃತ್ಯ ಕಾರ್ಯ ಕ್ರಮಗಳು ನಡೆಯಲಿದ್ದು, ಯೋಗಸ ಮಾವೇಶದಲ್ಲಿ ನೋಂದಾವಣೆಗೆ ಮತ್ತು ವಿವರಕ್ಕೆ ೯೮೪೪೫೭೬೪೨೯ ಕರೆ ಮಾಡಬಹುದು ಎಂದರು.

ರೋಟರಿ ಜಿಲ್ಲಾ ನಿರ್ದೇಶಕ ಅನಿಲ್ ಹೆಚ್.ಟಿ ಮಾತನಾಡಿ, ದಕ್ಷಿಣ ಭಾರತದಲ್ಲಿಯೇ ಯೋಗದ ರಾಜಧಾನಿ ಎಂಬ ಹೆಗ್ಗಳಿಕೆಯ ಮೈಸೂರಿನಲ್ಲಿ ಯೋಗ ಶೃಂಗ ಸಮಾವೇಶ ಆಯೋಜನೆ ಮೂಲಕ ಯೋಗ, ಧ್ಯಾನ ಪ್ರವಾಸೋದ್ಯಮಕ್ಕೂ ನೆರವಾಗಲಿದೆ. ಕೊಡಗಿಗೂ ಧ್ಯಾನ, ಯೋಗಾಸಕ್ತರು ಬರುವ ಸಾಧ್ಯತೆಯಿದೆ ಎಂದರಲ್ಲದೇ, ತಲತಲಾಂತರಗಳಿAದ ಅಷ್ಟಾಂಗ ಯೋಗವನ್ನು ಜಗತ್ತಿಗೆ ಪರಿಚಯಿಸುತ್ತಲೇ ಬಂದಿರುವ ಕನ್ನಡ ನಾಡಿನ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ರೋಟರಿ ಕೂಡ ಯೋಗ ಮತ್ತು ಧ್ಯಾನದ ಮಹತ್ವ ತಿಳಿಸುವ ಸಮಾವೇಶ ಹಮ್ಮಿಕೊಳ್ಳುವು ದರೊಂದಿಗೆ ಆರೋಗ್ಯ ಸಂರಕ್ಷಣೆಯ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಯೋಜನೆಗೆ ಸಿದ್ದವಾಗಿದೆ ಎಂದರು.

ರೋಟರಿ ವಲಯ ಸಹಾಯಕ ಗವರ್ನರ್

(ಮೊದಲ ಪುಟದಿಂದ) ದೇವಣಿರ ತಿಲಕ್ ಮಾತನಾಡಿ, ರೋಟರಿ ಜಿಲ್ಲೆಯಲ್ಲಿ ಸುಮಾರು ೪ ಸಾವಿರ ಸದಸ್ಯರು ೮೯ ಕ್ಲಬ್‌ಗಳಲ್ಲಿದ್ದು, ಜಗತ್ತಿನಲ್ಲಿ ರೋಟರಿ ಸಂಸ್ಥೆಯು ೨೫೦ ದೇಶಗಳಲ್ಲಿ ೧೨ ಲಕ್ಷ ಸದಸ್ಯರನ್ನು ಹೊಂದಿದೆ, ಇವರೆಲ್ಲರಿಗೂ ರೋಟರಿ ಇದೀಗ ಮೈಸೂರು ಯೋಗ ಶೃಂಗ ಸಮಾವೇಶದ ಮೂಲಕ ಯೋಗದ ಜಾಗೃತಿ ಸಾರುತ್ತಿದೆ ಎಂದರು..

ಸುದ್ದಿಗೋಷ್ಠಿಯಲ್ಲಿ ರೋಟರಿ ವಲಯ ಸೇನಾನಿ ಸಂಪತ್ ಕುಮಾರ್, ಮಡಿಕೇರಿ ರೋಟರಿ ಅಧ್ಯಕ್ಷ ನಡಿಕೇರಿಯಂಡ ಅಚ್ಚಯ್ಯ, ರೋಟರಿ ವುಡ್ಸ್ ಅಧÀ್ಯಕ್ಷ ವಸಂತ್ ಕುಮಾರ್ ಹಾಜರಿದ್ದರು.