ಮಡಿಕೇರಿ, ಮೇ ೧೨ : ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಲೆದರ್ ಬಾಲ್ "ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್" ಅಂತಿಮ ಪಂದ್ಯಾಟದಲ್ಲಿ ಕೂರ್ಗ್ ಬ್ಲಾಸ್ಟರ್ಸ್ ತಂಡ ೨೮ ರನ್‌ಗಳ ಜಯ ಸಾಧಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಕೂರ್ಗ್ ಯುನೈಟೆಡ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಟಾಸ್ ಗೆದ್ದ ಕೂರ್ಗ್ ಯುನೈಟೆಡ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಕೂರ್ಗ್ ಬ್ಲಾಸ್ಟರ್ಸ್ ತಂಡ ೧೦ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೧೧೭ ರನ್‌ಗಳನ್ನು ಗಳಿಸಿತು. ಇದನ್ನು ಬೆನ್ನಟ್ಟಿದ ಕೂರ್ಗ್ ಯುನೈಟೆಡ್ ತಂಡ ೧೦ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೮೯ ರನ್‌ಗಳನ್ನು ಗಳಿಸಿ ಸೋಲೊಪ್ಪಿಕೊಂಡಿತು.

ಕೂರ್ಗ್ ಬ್ಲಾಸ್ಟರ್ಸ್ ತಂಡದ ಆಟಗಾರ ಸಿ.ಎ.ಕಾರ್ತಿಕ್ ೩೫ ಬಾಲ್‌ಗಳಲ್ಲಿ ೯೫ ರನ್ ಸಿಡಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಚಾಂಪಿಯನ್ ತಂಡ ಕೂರ್ಗ್ ಬ್ಲಾಸ್ಟರ್ಸ್ ಗೆ ೧.೫೦ ಲಕ್ಷ ರೂ. ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಕೂರ್ಗ್ ಯುನೈಟೆಡ್ ತಂಡಕ್ಕೆ ೭೫ ಸಾವಿರ ರೂ. ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಯಿತು.

ಕೂರ್ಗ್ ಯುನೈಟೆಡ್ ತಂಡದ ಚೋನಿರ ಆರ್. ಅಯ್ಯಪ್ಪ ೩೧೫ ರನ್, ೬ ವಿಕೆಟ್ ಸಾಧನೆಯೊಂದಿಗೆ ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದರು. ಉತ್ತಮ ಬ್ಯಾಟರ್ ಪ್ರಶಸ್ತಿಗೂ ಭಾಜನರಾದರು. ರಾಯಲ್ ಟೈಗರ್ಸ್ ಆಟಗಾರ ಧ್ಯಾನ್ ಅಯ್ಯಪ್ಪ ಭವಿಷ್ಯದ ಆಟಗಾರ, ೮ ವಿಕೆಟ್ ಸಾಧನೆಯೊಂದಿಗೆ ಕೊಡವ ವಾರಿರ‍್ಸ್ ತಂಡದ ಪಿ. ಟಿ. ಪೂವಯ್ಯ ಉತ್ತಮ ಬೌಲರ್, ಕೂರ್ಗ್ ಬ್ಲಾಸ್ಟರ್ಸ್ ತಂಡದ ಎಂ.ಎ.ತಿಮ್ಮಯ್ಯ ಉತ್ತಮ ವಿಕೆಟ್ ಕೀಪರ್, ಎಂಟಿಬಿ ತಂಡದ ಶಿಪ್ರಜ್ ಸೋಮಣ್ಣ ಬೆಸ್ಟ್ ಕ್ಯಾಚ್, ವೈಲ್ಡ್ ಫ್ಲವರ್ ತಂಡ ಶಿಸ್ತಿನ ತಂಡ ಪ್ರಶಸ್ತಿ ಪಡೆದುಕೊಂಡಿತು.

ಇದಕ್ಕೂ ಮೊದಲು ಇಂದು ನಡೆದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಕೊಡವ ವಾರಿಯರ್ಸ್ ೯ ವಿಕೆಟ್‌ಗಳ ಜಯ ಸಾಧಿಸಿ ಕೊಡವ ಟ್ರೆöÊಬ್ಸ್ ತಂಡವನ್ನು ಮಣಿಸಿತು. ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಟಾಸ್ ಗೆದ್ದ ಕೊಡವ ಟ್ರೆöÊಬ್ಸ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ೧೦ ಓವರ್‌ಗಳಲ್ಲಿ ೫ ವಿಕೆಟ್‌ಗಳ ನಷ್ಟಕ್ಕೆ ೭೦ ರನ್‌ಗಳಿಸಿತು. ಇದನ್ನು ಬೆನ್ನಟ್ಟಿದ ಕೊಡವ ವಾರಿಯರ್ಸ್ ತಂಡ ೯.೧ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೭೪ ರನ್‌ಗಳನ್ನು ದಾಖಲಿಸಿ ಗೆಲುವು ಸಾಧಿಸಿತು. ಕೊಡವ ವಾರಿಯರ್ಸ್ ತಂಡದ ಆಟಗಾರ ಚರಿತ್ ಕುಟ್ಟಪ್ಪ ಅವರು ೩೧ ಬಾಲ್‌ಗಳಲ್ಲಿ ೪೨ ರನ್‌ಗಳನ್ನು ಗಳಿಸಿ ಪಂದ್ಯ ಪುರು ಷೋತ್ತಮ ಪ್ರಶಸ್ತಿ ಪಡೆದರು.

ಕ್ವಾಲಿಫೈಯರ್ ಎರಡನೇ ಪಂದ್ಯದಲ್ಲಿ ಕೂರ್ಗ್ ಬ್ಲಾಸ್ಟರ್ಸ್ ತಂಡ ಕೊಡವ ವಾರಿಯರ್ಸ್ ವಿರುದ್ಧ ೨೩ ರನ್‌ಗಳ ಜಯ ಸಾಧಿಸಿತು.

ಟಾಸ್ ಗೆದ್ದ ಕೂರ್ಗ್ ಬ್ಲಾಸ್ಟರ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ೧೦ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೮೦ ರನ್ ಗಳಿಸಿತು. ಕೊಡವ ವಾರಿಯರ್ಸ್ ೧೦ ಓವರ್‌ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೫೭ ರನ್‌ಗಳಿಸಿ ಸೋಲು ಒಪ್ಪಿಕೊಂಡಿತು.

ಕೂರ್ಗ್ ಬ್ಲಾಸ್ಟರ್ಸ್ ತಂಡದ ಕಾರ್ತಿಕ್ ಸಿ.ಎ ೧೮ ಬಾಲ್‌ಗೆ ೩೫ ರನ್ ಬಾರಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಸಾಮರಸ್ಯ ಬೆಳೆಸಲು ಕರೆ

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಅಂತಿಮ ಪಂದ್ಯಾವಳಿಯನ್ನು ಉದ್ಘಾ ಟಿಸಿ ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಕ್ರೀಡಾಕೂಟಗಳಲ್ಲಿ ಕಾಣುವ ಸಾಮರಸ್ಯ ಸಮಾಜದಲ್ಲೂ ಕಾಣಬೇಕು, ಸಾಮರಸ್ಯವನ್ನು ಬೆಳೆಸಲು ಎಲ್ಲರೂ ಕೈಜೋಡಿಸಬೇಕು ಎಂದರು.

ಬಹುಮಾನ ವಿತರಿಸಿ ಮಾತನಾ ಡಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಪ್ರೋತ್ಸಾಹ ಅಗತ್ಯವೆಂದರು. ತಾನು ವೈಯಕ್ತಿವಾಗಿ ಮತ್ತು ಸರಕಾರದಿಂದಲೂ ಅಗತ್ಯ ಸಹಕಾರ ಕೊಡಿಸುವುದಾಗಿ ತಿಳಿಸಿದರು.

ಬೆಳೆಗಾರರಾದ ಮಂಡೇಪAಡ ರತನ್ ಕುಟ್ಟಯ್ಯ, ರಿಪಬ್ಲಿಕ್ ಟಿವಿ ಮುಖ್ಯಸ್ಥ ಚೇರಂಡ ಕಿಶನ್ ಮಾದಪ್ಪ, ಕೂರ್ಗ್ ಕ್ರಿಕೆಟ್ ಫೌಂಡೇಷನ್ ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಮುಖ್ಯ ಸಂಚಾಲಕ ಪೊರುಕೊಂಡ ಸುನಿಲ್, ಉಪಾಧ್ಯಕ್ಷ ಪಾಲಚಂಡ ಜಗನ್ ಉತ್ತಪ್ಪ, ನಿರ್ದೇಶಕರಾದ ಚಂಡಿರ ರಚನ್ ಚಿಣ್ಣಪ್ಪ, ಕುಲ್ಲೇಟಿರ ಶಾಂತಾ ಕಾಳಪ್ಪ, ಮಡ್ಲಂಡ ದರ್ಶನ್ ಪೆಮ್ಮಯ್ಯ, ಚೆರುಮಂದAಡ ಡಾ.ಸೋಮಣ್ಣ, ಟಿ.ಬಿ. ಕಿರಣ್, ಬಲ್ಲಂಡ ರೇಣಾ ದೇವಪ್ಪ, ಮಣವಟ್ಟಿರ ಲಿಖಿತಾ ರಾಯ್, ಉದ್ಯಮಿ ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ, ನಾಪೋಕ್ಲು ಗ್ರಾ.ಪಂ. ಮಾಜಿ ಅಧ್ಯಕ್ಷ ಇಸ್ಮಾಯಿಲ್, ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.