ಇಂದು ಚಾಲನೆ

ಸಿದ್ದಾಪುರ, ಮೇ ೧೨: ಜಿಲ್ಲಾ ಮಟ್ಟದ ಜೇನು ಕುರುಬ ವಾಲಿಬಾಲ್ ಕಪ್ಪ್ ಪಂದ್ಯಾವಳಿ ವೀರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೇಟ್ ಹಾಡಿಯಲ್ಲಿ ತಾ. ೧೩ ರಂದು (ಇಂದು) ಗಣ್ಯರಿಂದ ಉದ್ಘಾಟನೆ ಗೊಳ್ಳಲಿದೆ ಜಿಲ್ಲೆಯ ಆದಿವಾಸಿ ಜನಾಂಗದ ೩೦ಕ್ಕೂ ಹೆಚ್ಚು ತಂಡಗಳು ಭಾಗವಹಿಸಲಿವೆ.

ತಾ. ೧೪ ರಂದು ಅಂತಿಮ ಪಂದ್ಯಾವಳಿ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಗಣ್ಯರು, ಸಮಾಜ ಸೇವಕರು, ದಾನಿಗಳು ಭಾಗವಹಿಸಲಿದ್ದಾರೆ ಎಂದು ಜೇನು ಕುರುಬ ಸಂಘಟನೆಯ ಅಧ್ಯಕ್ಷ ಜೆ.ಕೆ ರಾಮು ತಿಳಿಸಿದ್ದಾರೆ.