ನಾಪೋಕ್ಲು, ಮೇ ೧೨: ಸಮೀಪದ ಬಲ್ಲಮಾವಟಿ ಗ್ರಾಮದಲ್ಲಿ ಭಾನುವಾರ ಸಂಜೆ ಬೈಕ್ ಹಾಗೂ ಟಿಪ್ಪರ್‌ಗಳ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ನಾಪೋಕ್ಲುವಿನ ಹಳೆ ತಾಲೂಕಿನ ಭಗವತಿ ಕಲ್ಯಾಣ ಮಂಟಪದಲ್ಲಿ ವಿವಾಹ ಸಮಾರಂಭ ಪೂರೈಸಿ ಅಯ್ಯಂ ಗೇರಿಯತ್ತ ತೆರಳುತ್ತಿದ್ದ ಇಬ್ಬರು ಸವಾರರಿದ್ದ ಬೈಕ್ ಅಯ್ಯಂಗೇರಿ ಕಡೆ ಯಿಂದ ನಾಪೋಕ್ಲುವಿನತ್ತ ಬರುತ್ತಿದ್ದ ಟಿಪ್ಪರ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕಲ್ಲಿ ಇದ್ದವರು ಗಂಭೀರ ಗಾಯಗೊಂಡಿದ್ದಾರೆ.

ಅಯ್ಯAಗೇರಿಯ ತೊತ್ತಿಯಂಡ ಸೋಮಯ್ಯ ಅವರ ಮಗ ಮುಕೇಶ್ (೨೭) ಹಾಗೂ ಅವರ ಚಿಕ್ಕಪ್ಪ ತೊತ್ತಿಯಂಡ ರಾಕೇಶ್ ಗಾಯಗೊಂಡ ವರು. ಬಲ್ಲಮಾವಟಿಯ ಪಡಿಯಾಣಿ ಜಂಕ್ಷನ್ ಬಳಿಯ ತಿರುವಿನಲ್ಲಿ ಎದುರಿ ನಿಂದ ಬಂದ ಟಿಪ್ಪರ್‌ಗೆ ಡಿಕ್ಕಿ ಹೊಡೆ ದಿದ್ದು, ಇಬ್ಬರ ಕಾಲು ಹಾಗು ತಲೆಗೆ ಗಂಭೀರ ಗಾಯಗಳಾಗಿವೆ. ಗಾಯಾಳು ಗಳನ್ನು ನಾಪೋಕ್ಲುವಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಪೋಕ್ಲು ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡು ಕಾನೂನಿನ ಕ್ರಮ ಕೈಗೊಂಡಿದ್ದಾರೆ.