ಕರಿಕೆ, ಮೇ ೧೨: ಇಲ್ಲಿಗೆ ಸಮೀಪದ ಚೆತ್ತುಕಾಯ ದೊಡ್ಡಕೇರಿ ಎಂಬಲ್ಲಿ ಗಾಳಿ ಮಳೆಗೆ ಅಪಾರ ಪ್ರಮಾಣದ ಫಸಲು ನಾಶವಾದ ಘಟನೆ ನಡೆದಿದೆ. ಮಾವಜಿ ಜಯಪ್ರಕಾಶ್ ಎಂಬವರ ಅಡಿಕೆ, ಗೇರು,ರಬ್ಬರ್ ಬೆಳೆ ಗಾಳಿಗೆ ಮುರಿದು ಬಿದ್ದ ಪರಿಣಾಮ ಸುಮಾರು ಇಪ್ಪತ್ತೆöÊದು ಸಾವಿರ ರೂಪಾಯಿ ನಷ್ಟ ಸಂಭವಿಸಿದೆ.