ಶ್ರೀಮಂಗಲ, ಮೇ ೧೨: ಸುಡು ಬಿಸಿಲು ಹಾಗೂ ಬೇಸಿಗೆಯ ದಾಖಲೆಯ ಗರಿಷ್ಠ ತಾಪಮಾನದಿಂದ, ತೋಟಗಳಿಗೆ ನೀರು ಬಳಕೆಯಿಂದ ಹರಿವು ನಿಲ್ಲಿಸಿ ಬತ್ತಿಹೋಗಿದ್ದ ನದಿಗಳು ಕಳೆದ ಹಲವು ದಿನಗಳಿಂದ ಸುರಿದ ಮಳೆಯಿಂದ ಹರಿಯಲಾರಂಭಿಸಿವೆ.

ಪೊನ್ನAಪೇಟೆ ತಾಲೂಕು ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹರಿಯುವ ಕಕ್ಕಟ್ಟ್ ಪೊಳೆ ನದಿಗೆ ಇದೀಗ ಮತ್ತೆ ಜೀವಕಳೆ ಮೂಡಿದೆ. ನಿಧಾನವಾಗಿ ತುಂಬಿ ನದಿ ಹರಿಯತೊಡಗಿದೆ. ಮಳೆಗಾಲ ಮುನ್ನವೇ ನದಿ ಹರಿಯುವುದನ್ನು ಕಂಡು ಗ್ರಾಮಸ್ಥರು ಸಂತಸ ಪಡುತ್ತಿದ್ದಾರೆ.

-ಹರೀಶ್ ಮಾದಪ್ಪ