ಕುಶಾಲನಗರ, ಮೇ ೧೨: ಶ್ರೀ ಗಣಪತಿ ದೇವರ ೩೨ ಅವತಾರದಲ್ಲಿ ಒಂದಾದ ತರುಣ ಗಣಪತಿ ಅವತಾರದ ಬೆಳ್ಳಿ ಕವಚವನ್ನು ಸ್ಥಳೀಯ ದಾನಿಗಳು ದೇವಾಲಯಕ್ಕೆ ಅರ್ಪಿಸಿದ್ದಾರೆ.

ಕುಶಾಲನಗರದ ಉದ್ಯಮಿ ಬಿ.ಎಂ. ನಾಗೇಶ್ ಮತ್ತು ಡಾ. ನಂದಿನಿ ನಾಗೇಶ್ ದಂಪತಿ ಅಕ್ಷಯ ತೃತೀಯದಂದು ದೇವಾಲಯಕ್ಕೆ ಹಸ್ತಾಂತರಿಸಿದರು.

ಈ ಸಂದರ್ಭ ದೇವಾಲಯದ ಪ್ರಧಾನ ಅರ್ಚಕರಾದ ನಾಗೇಂದ್ರ ಬಾಬು, ರಾಘವೇಂದ್ರ ಭಟ್, ದೇವಾಲಯ ಆಡಳಿತ ಮಂಡಳಿ ಸದಸ್ಯರು ಮತ್ತಿತರರು ಇದ್ದರು.