ನಾಪೋಕ್ಲು, ಮೇ ೧೨: ಕೊಡಗು ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿ ಯೇಷನ್ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚೇರಂಬಾಣೆಯ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಯಶಸ್ ಮಂದಣ್ಣ ಸಾಧನೆ ಮಾಡಿದ್ದಾರೆ.

೧೧ ವರ್ಷದೊಳಗಿನ ಬಾಲಕರ ಟೂರ್ನಿಯಲ್ಲಿ ಸಿಂಗಲ್ಸ್ನಲ್ಲಿ ರನ್ನರ್ಸ್ ಪ್ರಶಸ್ತಿ ಹಾಗೂ ಡಬಲ್ಸ್ನಲ್ಲಿ ವಿನ್ನರ್ ಪ್ರಶಸ್ತಿಯನ್ನು ಗಳಿಸಿದ್ದಾರೆ. ಇವರು ಕೇಕಡ ಬೋಪಣ್ಣ ಮತ್ತು ಗೀತಾ ದಂಪತಿಯ ಪುತ್ರ ರಾಜರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾಸಂಸ್ಥೆಯ ನಾಟೋಳಂಡ ವಿಜು ತರಬೇತಿ ನೀಡಿದ್ದರು.

ಮೇ ನಾಲ್ಕು ಮತ್ತು ಐದರಂದು ಮಡಿಕೇರಿಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಟೂರ್ನಿ ನಡೆದಿತ್ತು.