ಮಡಿಕೇರಿ, ಮೇ ೧೨: ಮೈಸೂರು ಕೆ.ಆರ್. ಮಲ್ಟಿ ಸ್ಪೆಷಾ ಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹತ್ಯೆಯಾದ ಮೀನಾ ತಾಯಿ ಜಾನಕಿಗೆ ಹೇಳಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಸಾಂತ್ವನ ಹೇಳಿದರು. ಆರೋಪಿ ಪ್ರಕಾಶ್ ಹಲ್ಲೆಯಿಂದ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಜಾನಕಿ ಚಿಕಿತ್ಸೆ ಪಡೆಯುತ್ತಿದ್ದ ಕುಟುಂಬ ವರ್ಗಕ್ಕೆ ಶಾಸಕ ಮಂತರ್ ಸಾಂತ್ವನ ಹೇಳಿ ಆರೋಪಿಗೆ ಕಠಿಣ ಕಾನೂನು ಕ್ರಮ ಆಗಲಿದೆ ಎಂದು ವಿಶ್ವಾಸ ತುಂಬಿದರು. ಜಾನಕಿ ಅವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಮಂತರ್ ಸೂಚನೆ ನೀಡಿದರು.