ಮಡಿಕೇರಿ, ಮೇ ೧೪: ನಿವೃತ್ತ ನೌಕರರ ಮೈಸೂರು ವಿಭಾಗಮಟ್ಟದ ಪಿಂಚಣಿ ಅದಾಲತ್ ಕಾರ್ಯಕ್ರಮ ತಾ. ೧೭ ರಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ವೀಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಪೂರ್ವಾಹ್ನ ೧೧ ಗಂಟೆಗೆ ನಡೆಯಲಿದೆ. ಕುಂದುಕೊರತೆ ಇರುವ ನಿವೃತ್ತ ನೌಕರರು ಖುದ್ದಾಗಿ ಭಾಗವಹಿಸಿ, ತಮ್ಮ ಕುಂದುಕೊರತೆಗಳನ್ನು ವೆಬಿನಾರ್ ಮೂಲಕ ಪರಿಹಾರ ಕಂಡುಕೊಳ್ಳವAತೆ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಬಿ. ಮಾದಮ್ಮಯ್ಯ ತಿಳಿಸಿದ್ದಾರೆ.