ಕೂಡಿಗೆ, ಮೇ ೧೪: ಇಲ್ಲಿಗೆ ಸಮೀಪದ ಕಣಿವೆ ಬಳಿಯಿರುವ ಹಾರಂಗಿ ಮುಖ್ಯ ನಾಲೆ ಬಳಿ ಯುವಕನ ಮೃತದೇಹ ಪತ್ತೆಯಾಗಿದ್ದು, ಮೂಲತಃ ಮಡಿಕೇರಿಯವರಾದ ಪ್ರಸ್ತುತ ಸುಳ್ಯದಲ್ಲಿ ನೆಲೆಸಿರುವ ಕಣ್ಣಂಡ ರಾಮು ಅವರ ಪುತ್ರ ಬೆಳ್ಯಪ್ಪ (೨೮) ಎಂಬವರ ಮೃತದೇಹ ಎಂದು ತಿಳಿದುಬಂದಿದೆ.

ಅವಿವಾಹಿತ ಬೆಳ್ಯಪ್ಪ ಏಷಿಯನ್ ಪೈಂಟ್ಸ್ ಕೊಡಗು ಜಿಲ್ಲಾ ವ್ಯವಸ್ಥಾಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದ್ದು, ಮೇಲ್ನೋಟಕ್ಕೆ ವಿಷ ಸೇವಿಸಿರುವ ಶಂಕೆ ವ್ಯಕ್ತಗೊಂಡಿದೆ.

ಮೃತನ ತಂದೆ ರಾಮು ನೀಡಿದ ದೂರಿನನ್ವಯ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.