ಕುಶಾಲನಗರ, ಮೇ ೧೪: ವಾಸವಿ ಜಯಂತಿ ಅಂಗವಾಗಿ ಕುಶಾಲನಗರ ವಾಸವಿ ಯುವಜನ ಸಂಘದ ವತಿ ಯಿಂದ ಸಮುದಾಯದ ಸದಸ್ಯರಿಗೆ ಒಳಾಂಗಣ ಕ್ರೀಡೆಗಳನ್ನು ಹಮ್ಮಿ ಕೊಳ್ಳಲಾಯಿತು. ಕುಶಾಲನಗರ ವಾಸವಿ ಮಹಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಯುವಜನ ಸಂಘದ ಮಾಜಿ ಅಧ್ಯಕ್ಷ ನಾಗ ಪ್ರವೀಣ್ ಉದ್ಘಾಟಿಸಿದರು.

ಹಾವು-ಏಣಿ ಆಟ, ಲೂಡೋ, ನಿಧಾನ ಸೈಕಲ್ ಓಡಿಸುವುದು ಮತ್ತಿತರ ಆಟಗಳನ್ನು ನಡೆಸಲಾಯಿತು. ವಾಸವಿ ಯುವಜನ ಸಂಘದ ಅಧ್ಯಕ್ಷ ಪ್ರವೀಣ್, ರವಿಪ್ರಕಾಶ್ ಭಗವಾನ್, ನಿಖಿಲ್, ಶ್ರೇಯಸ್, ರಾಕೇಶ್, ಗೌತಮ್, ಬಾಲಾಜಿ ಮತ್ತು ಸಂಘದ ನಿರ್ದೇಶಕರುಗಳು ಇದ್ದರು.