ಕಡಂಗ, ಮೇ ೧೪: ಬೆಪ್ಪೆನಾಡು ಕಡಂಗಮರೂರು ಗ್ರಾಮದ ಶ್ರೀ ಭಗವತಿ ಈಶ್ವರ ಅಯ್ಯಪ್ಪ ಹಾಗೂ ಪರಿವಾರ ದೇವರ ಜಾತ್ರಾ ಮಹೋತ್ಸವ ತಾ. ೧೬ ರಿಂದ ೨೧ ರವರೆಗೆ ವೇದಮೂರ್ತಿ ಎ.ಜೆ. ಪಂಡರೀಶ ಅರಳಿತ್ತಾಯ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.

ತಾ. ೧೬ ರಂದು ಬೆಳಿಗ್ಗೆ ೯ ಗಂಟೆಗೆ ಪುಣ್ಯಾಹ ಗಣಹೋಮ, ತೋರಣ ಹಾಕುವುದು, ಮಹಾಪೂಜೆ, ಪ್ರಸಾದ ವಿನಿಯೋಗ, ಸಂಜೆ ೬ ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಭಂಡಾರ ತರುವುದು, ದೇವರ ಬಲಿ, ಮಹಾಪೂಜೆ, ಪ್ರಸಾದ ವಿನಿಯೋಗ ನಡೆಯಲಿದೆ. ಉಳಿದ ದಿನಗಳಲ್ಲಿ ವಿಶೇಷ ಪೂಜೆಗಳು ನೆರವೇರಲಿವೆ. ತಾ. ೧೬ ರಿಂದ ೧೯ ರವರೆಗೆ ದೇವರ ಕಟ್ಟು ಬೀಳಲಿದೆ.