ಮಡಿಕೇರಿ, ಮೇ ೧೪: ವೀರಾಜಪೇಟೆ ರೋಟರಿ ಸಂಸ್ಥೆಯ ವತಿಯಿಂದ ತಾ. ೧೮ ರಂದು ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ.

ವೀರಾಜಪೇಟೆ ರೋಟರಿ ಶಾಲೆಯಲ್ಲಿ (ವೀರಾಜಪೇಟೆ ತಾಲೂಕು ಕಚೇರಿ ಬಳಿ) ಬೆಳಿಗ್ಗೆ ೯.೩೦ ಗಂಟೆಯಿAದ ಮಧ್ಯಾಹ್ನ ೩ ಗಂಟೆಯವರೆಗೆ ಶಿಬಿರ ನಡೆಯಲಿದೆ. ಪರಿಣಿತ ವೈದ್ಯರಾದ ಡಾ. ರಘುನಾಥ್, ಎಂ.ಎಸ್. ಬೆಳ್ಯಪ್ಪ, ಡಾ. ರವಿ, ಡಾ. ಸುನಿತಾ, ಡಾ. ಸಾಗರಿಕ, ಡಾ. ನಿತ್ಯಾನಂದ ತಪಾಸಣೆ ಮತ್ತು ಚಿಕಿತ್ಸಾ ಸಲಹೆ ನೀಡಲಿದ್ದಾರೆ ಎಂದು ವೀರಾಜಪೇಟೆ ರೋಟರಿ ಅಧ್ಯಕ್ಷ ಎಂ.ಎA. ಬನ್ಸಿ ಪೂವಣ್ಣ, ಬೆಂಗಳೂರು ಗ್ಲೋಬಲ್ ಫೌಂಡೇಶನ್ ಟ್ರಸ್ಟಿ ಕರ್ನಲ್ ಸಿ.ಎ. ಅಯ್ಯಪ್ಪ ತಿಳಿಸಿದ್ದಾರೆ. ಕ್ಯಾನ್ಸರ್ ತಪಾಸಣೆ ಅಥವಾ ಚಿಕಿತ್ಸೆಗಾಗಿ ಶಿಬಿರಕ್ಕೆ ಬರುವವರು ಅವರಿಗೆ ಸಂಬAಧಿಸಿದ ವೈದ್ಯಕೀಯ ಮಾಹಿತಿ, ಕಡತ ತರುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿ ಮತ್ತು ನೋಂದಣಿಗಾಗಿ ೭೦೨೨೯೨೪೮೬೦, ೯೪೪೮೪೪೮೭೮೦ ಸಂಪರ್ಕಿಸಬಹುದು.