ಮಡಿಕೇರಿ, ಮೇ ೧೪: ಕೇರಳದ ಕ್ಯಾಲಿಕಟ್‌ನಲ್ಲಿ ನಡೆದ ಅಂರ‍್ರಾಷ್ಟಿçÃಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಮಾದಾಪುರದ ಇಗ್ಗೋಡ್ಲು ಗ್ರಾಮದ ರಾಘವೇಂದ್ರ ಹೆಚ್.ಎಸ್ ಅವರ ಪುತ್ರಿ ಬೃಂದಾ ಹೆಚ್.ಆರ್ ಬೆಳ್ಳಿಯ ಪದಕ ಹಾಗೂ ಸತೀಶ್ ಕುಮಾರ್ ಅವರ ಪುತ್ರಿ ಸಾತ್ವಿಕ ಬಿ.ಎಸ್. ಕಂಚಿನ ಪದಕ ಗೆದ್ದಿದ್ದಾರೆ. ಈ ಇಬ್ಬರು ವಿದ್ಯಾರ್ಥಿನಿಯರಿಗೆ ಸುದರ್ಶನ್ ಮಕ್ಕಂದೂರು ಅವರು ತರಬೇತಿ ನೀಡಿದ್ದಾರೆ.