ಕುಶಾಲನಗರ, ಮೇ ೧೪: ವೀರಶೈವ-ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕ ಆಶ್ರಯದಲ್ಲಿ ಕುಶಾಲನಗರ ಬಸವೇಶ್ವರ ದೇವಸ್ಥಾನದಲ್ಲಿ ಬಸವ ಜಯಂತಿ ಕಾರ್ಯಕ್ರಮ ನಡೆಯಿತು. ಶಿಕ್ಷಕರಾದ ಟಿ.ಬಿ. ಮಂಜುನಾಥ್ ಮುಖ್ಯ ಭಾಷಣ ಮಾಡಿದರು.

ಸಮಾಜದ ಎಲ್ಲ ವರ್ಗದ ಜನರನ್ನು ಒಂದುಗೂಡಿಸಿದ ಬಸವಣ್ಣ, ಜಾತೀಯತೆಯ ವಿರುದ್ಧ ಸಮರ ಸಾರಿದರು ಎಂದರು.

ಬಸವಣ್ಣ ನಡೆದು ಬಂದ ದಾರಿ, ಅವರ ವಚನಗಳ ಸಾರ, ಅಂತರAಗ ಬಹಿರಂಗ ಶುದ್ಧತೆಯ ಬಗ್ಗೆ ಧರ್ಮದ ಮಹತ್ವದ ಬಗ್ಗೆ ಬಸವಣ್ಣನವರಲ್ಲಿದ್ದ ಆಲೋಚನೆಗಳನ್ನು ವಚನಗಳ ಮೂಲಕ ಮಂಜುನಾಥ್ ತಿಳಿಸಿದರು.

ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ವಿ. ಶಿವಪ್ಪ, ೧೨ನೇ ಶತಮಾನದಲ್ಲಿ ಶರಣ ಚಳವಳಿಯ ಮೂಲಕ ಹೊಸ ಚಿಂತನೆಯ ಪ್ರವಾಹವನ್ನು ತಂದವರು ಭಕ್ತಿ ಭಂಡಾರಿ ಬಸವಣ್ಣನವರು. ಅವರ ಭಕ್ತಿ, ಕಾಯಕನಿಷ್ಠೆ ನೆನೆಯುವ ದಿನವಾಗಿದೆ.

ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಟಿ.ಎಸ್. ಶಾಂಭ ಶಿವಮೂರ್ತಿ, ಕೋಶಾಧಿಕಾರಿ ಎಚ್.ಪಿ. ಉದಯ್ ಕುಮಾರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್, ವೀರಶೈವ ಲಿಂಗಾಯತ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್. ನಂದೀಶ್, ಪದಾಧಿಕಾರಿಗಳಾದ ಬಿ. ನಟರಾಜ್, ಎಸ್. ವಿರೂಪಾಕ್ಷ, ವೀರಶೈವ ಸಮಾಜದ ಮಾಜಿ ಅಧ್ಯಕ್ಷ ಎಂ.ಬಿ. ಬಸವರಾಜು, ಅಕ್ಕನ ಬಳಗದ ಅಧ್ಯಕ್ಷೆ ಕಮಲ ಉದಯ್ ಕುಮಾರ್, ಲತಾ, ಮುಖಂಡರಾದ ಪಿ.ಮಹಾದೇವಪ್ಪ, ಮತ್ತಿತರರು ಇದ್ದರು. ಸಮಾಜದ ಮಹಿಳೆಯರು ವಚನ ಗಾಯನ ಮಾಡಿದರು.