ಮಡಿಕೇರಿ, ಮೇ ೧೪: ಪ್ರಸಕ್ತ ಸಾಲಿನ ಮೈಸೂರು ವಿಭಾಗ ಮಟ್ಟದ ಪಿಂಚಣಿ ಅದಾಲತ್ ಕಾರ್ಯಕ್ರಮ ಪಿಂಚಣಿ ಅದಾಲತ್ ತಾ. ೧೭ ರಂದು ಬೆಳಿಗ್ಗೆ ೧೧ ಗಂಟೆಗೆ ಮಡಿಕೇರಿ ಜಿಲ್ಲಾಧಿಕಾರಿ ಅವರ ಕಾರ್ಯಾಲಯದ ವಿ.ಸಿ. ಸಭಾಂಗಣದಲ್ಲಿ (ವೆಬಿನಾರ್ ಮೂಲಕ) ನಡೆಯಲಿದೆ.

ಈ ಸಂಬAಧ ಕುಂದುಕೊರತೆಗಳು ಇದ್ದಲ್ಲಿ, ನಿವೃತ್ತ ರಾಜ್ಯ ಸರ್ಕಾರಿ ನೌಕರರು ತಮ್ಮ ಅಹವಾಲುಗಳನ್ನು ಸೂಕ್ತ ದಾಖಲೆಗಳೊಂದಿಗೆ ತಾ. ೧೫ ರೊಳಗೆ ಕೊಡಗು ಜಿಲ್ಲೆಯ ಉಪ ನಿರ್ದೇಶಕರು, ಜಿಲ್ಲಾ ಖಜಾನೆ ಕೊಠಡಿ ಸಂಖ್ಯೆ ೧೦ (ದೂ. ೨೨೫೬೫೪) ಜಿಲ್ಲಾಡಳಿತ ಭವನ, ಮಡಿಕೇರಿರವರಿಗೆ ಸಲ್ಲಿಸಲು ಹಾಗೂ ಅದಾಲತ್‌ನಲ್ಲಿ ಭಾಗವಹಿಸುವಂತೆ ಜಿಲ್ಲಾ ಖಜಾನೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.