ಕರಿಕೆ, ಮೇ ೧೬: ಇಲ್ಲಿಗೆ ಸಮೀಪದ ಚೆತ್ತುಕಾಯ ದೊಡ್ಡಚೇರಿ ಎಂಬಲ್ಲಿ ಶ್ರೀ ಗುಳಿಗ ಹಾಗೂ ಮಲೆ ಚಾಮುಂಡಿ ದೈವಗಳ ಪ್ರತಿಷ್ಠಾ ಕಾರ್ಯಕ್ರಮ ಹಾಗೂ ದೈವ ನರ್ತನ ಸೇವೆಗಳು ನಡೆದವು.

ಪೆರಾಜೆಯ ತಂತ್ರಿಗಳಾದ ಶ್ರೀ ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ಸುದರ್ಶನ ಹೋಮ, ಗಣಪತಿ ಹವನ ಸೇರಿದಂತೆ ಧಾರ್ಮಿಕ ವಿಧಿ ವಿಧಾನಗಳು ನಡೆದವು. ನಂತರ ಗುಳಿಗ ಹಾಗೂ ಮಲೆ ಚಾಮುಂಡಿ ದೈವಗಳ ಕೋಲ ನಡೆದವು. ನಂತರ ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಿಲಾಗಿತ್ತು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧÀ್ಯಕ್ಷ ಕೆ.ಜಿ. ರತೀಶ್, ಪ್ರಮುಖರಾದ ಕಂಡಿಗೆ ತಿಮ್ಮಯ್ಯ, ಬಿ.ಕೆ. ರಮೇಶ್, ಎಂ.ಸಿ. ಚಂದ್ರಶೇಖರ, ಜಯಾನಂದ ಹುಲಿಮನೆ, ಚೇತನ್ ಹೊದ್ದೆಟ್ಟಿ, ರಾಜನ್ ಸೇರಿದಂತೆ ಇತರೆ ಪ್ರಮುಖರು ಹಾಗೂ ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.