ಸೋಮವಾರಪೇಟೆ, ಮೇ ೧೬: ಕಳೆದ ತಾ. ೯ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನಿಂದಲೇ ಬರ್ಬರವಾಗಿ ಹತ್ಯೆಯಾದ ಮೀನಾಳ ಮನೆಗೆ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯೂ ಆಗಿರುವ ಡಾ. ಪುಷ್ಪ ಅಮರನಾಥ್ ಅವರು ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.

ಕುಂಬಾರಗಡಿಗೆಯ ಮೃತಳ ಮನೆಗೆ ತೆರಳಿದ ಅವರು, ಮೀನಾಳ ಪೋಷಕರಾದ ಸುಬ್ರಮಣಿ ಹಾಗೂ ಜಾನಕಿ ಅವರುಗಳಿಗೆ ಸಾಂತ್ವನ ಹೇಳಿದರು. ಘಟನೆಯ ವಿವರಣೆ ಪಡೆದು ಬೇಸರ ವ್ಯಕ್ತಪಡಿಸಿದ ಪುಷ್ಪ ಅವರು, ವೈಯಕ್ತಿಕವಾಗಿ ಸಹಾಯ ಹಸ್ತ ಚಾಚಿದರು.

ಈ ಕೃತ್ಯ ಇಡೀ ಮನುಕುಲ ಒಪ್ಪುವಂತದ್ದಲ್ಲ. ಇಂತಹ ಪೈಶಾಚಿಕ ಕೃತ್ಯ ಎಸಗಿದ ಆರೋಪಿಗೆ ತಕ್ಕ ಶಿಕ್ಷೆಯಾಗಲೇಬೇಕು. ಮುಂದೆ ಇಂತಹ ಕೃತ್ಯಗಳು ಎಲ್ಲೂ ನಡೆಯಬಾರದು ಎಂದು ಹೇಳಿದರು. ಈ ಸಂದರ್ಭ ಮೈಸೂರು ಮಹಾನಗರ ಪಾಲಿಕೆ ಮೇಯರ್ ಪುಷ್ಪವಲ್ಲಿ ಇದ್ದರು.