ಮಡಿಕೇರಿ, ಮೇ ೧೬: ಬಾಳೆಲೆಯ ವಿಜಯಲಕ್ಷಿö್ಮ ಪ.ಪೂ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಅರಮಣಮಾಡ ಕಪ್ ಕೊಡವ ಕೌಟುಂಬಿಕ ಕ್ರಿಕೆಟ್ ಉತ್ಸವದಲ್ಲಿ ಇಂದು ಡಿ.ಸಿ ಹಾಗೂ ಎ.ಸಿ ಪಾಲ್ಗೊಂಡು ಉತ್ತೇಜಿಸಿದರು.

ಕ್ರಿಕೆಟ್ ಉತ್ಸವ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಹಾಗೂ ಉಪವಿಭಾಗಾಧಿಕಾರಿ ವಿನಾಯಕ ನರ್ವಾಡೆ ಅವರುಗಳು ಸ್ವತಃ ಮೈದಾನಕ್ಕೂ ಇಳಿದು ಬ್ಯಾಟಿಂಗ್-ಬೌಲಿAಗ್ ಮಾಡುವ ಮೂಲಕ ಆಟಗಾರರನ್ನು ಉತ್ತೇಜಿಸಿದರು. ಇಬ್ಬರು ತಲಾ ಒಂದೊAದು ಓವರ್ ಬೌಲಿಂಗ್ ಮಾಡಿದರಲ್ಲದೆ ಬ್ಯಾಟ್ ಬೀಸಿ ಚೆಂಡನ್ನು ಬೌಂಡರಿಯತ್ತ ಕಳಿಸಿ ತಾವುಗಳು ಕ್ರೀಡೆಯಲ್ಲೂ ನಿಪುಣರಿರುವುದಾಗಿ ತೋರಿಸಿ ಜನರನ್ನು ಕೆಲ ಹೊತ್ತು ರಂಜಿಸಿದರು.

ಅತಿಥಿಗಳಾಗಿ ಆಗಮಿಸಿದ್ದ ಇವರುಗಳು ಕಳಕಂಡ ಹಾಗೂ ಮಾಚೆಟ್ಟಿರ ಕುಟುಂಬಗಳ ನಡುವಿನ ಪಂದ್ಯದಲ್ಲಿ ಆಟಗಾರರನ್ನು ಪರಿಚಯಿಸಿಕೊಳ್ಳುವ ಮೂಲಕ ಪಂದ್ಯಾವಳಿಗೆ ಹಾಗೂ ಕ್ರಿಕೆಟ್ ಉತ್ಸವಕ್ಕೆ ಶುಭ ಕೋರಿದರು.