ಸುಂಟಿಕೊಪ್ಪ, ಮೇ ೧೬: ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನದ ಪ್ರತಿಷ್ಠಾಪನಾ ವಾರ್ಷಿಕ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು.

ಶ್ರೀ ಚಾಮುಂಡೇಶ್ವರಿ, ಶ್ರೀ ಮುತ್ತಪ್ಪ ಹಾಗೂ ಪರಿವಾರ ದೇವರುಗಳ ೨ನೇ ಪ್ರತಿಷ್ಠಾಪನಾ ವಾರ್ಷಿಕ ಮಹೋತ್ಸವದ ಅಂಗವಾಗಿ ಶ್ರೀ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ದೇವಾಲಯದ ಅರ್ಚಕ ಮಂಜುನಾಥ್ ಉಡುಪ ಹಾಗೂ ಕೇರಳದ ತಂತ್ರಿಗಳಾದ ಶಂಕರ ನಂಬೂದರಿ ತಂಡದವರು ೨ ದಿನಗಳ ಕಾಲ ವಿಶೇಷ ಪೂಜೆಗಳನ್ನು ಸಲ್ಲಿಸಿದರು.

ಗಣಹೋಮ, ಕಲಶಾಭಿಷೇಕ, ತತ್ವಹೋಮ, ಮೃತ್ಯುಂಜಯ ಹೋಮ, ನವಗ್ರಹಗಳ ಪೂಜೆ ಕೈಂಕರ್ಯಗಳನ್ನು ನೆರವೇರಿಸಿದರು.

ಈ ಸಂದರ್ಭ ಸಮಿತಿ ಅಧ್ಯಕ್ಷ ಪಟ್ಟೆಮನೆ ಉದಯ, ಖಜಾಂಚಿ ರಮೇಶ್ ಪಿಳ್ಳೆ, ಕಾರ್ಯದರ್ಶಿ ಪಿ.ಸಿ. ಮೋಹನ, ಸಹ ಕಾರ್ಯದರ್ಶಿ ಯಂಕನ ಕೌಶಿಕ್, ಸಲಹೆಗಾರರಾದ ಕೆ.ಪಿ. ಜಗನ್ನಾಥ್, ಜಗದೀಶ್ ರೈ, ದೀನು ದೇವಯ್ಯ, ಜೆ.ಎನ್. ಚಂದ್ರಶೇಖರ್, ಬಿ.ವಿ. ಮಹೇಶ್ ರೈ, ಬಿ.ಡಿ. ರಾಜು ರೈ, ವೀಣಾ ಮಹೇಶ್, ರಮ್ಯಾ ಮೋಹನ್, ಪಿ.ಸಿ. ಸುಂದರ್, ಶೈಲಾ ಸಂದರ್, ಪೂರ್ಣ ಸತೀಶ್, ಸೌಮ್ಯ ಪ್ರಕಾಶ್ ಸೇರಿದಂತೆ ಇತರರು ಹಾಜರಿದ್ದರು.