*ಗೋಣಿಕೊಪ್ಪ, ಮೇ ೧೬: ನಾಯಿಗಳಿಗೆ ಹುಚ್ಚು ರೋಗ ನಿಯಂತ್ರಣ ಉಚಿತ ಲಸಿಕಾ ಶಿಬಿರವನ್ನು ಗೋಣಿ ಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ತಾ. ೨೦ರಂದು ನಡೆಯಲಿದೆ ಎಂದು ಗೋಣಿಕೊಪ್ಪ ಪಶು ಆಸ್ಪತ್ರೆ ಮುಖ್ಯ ಪಶು ವೈದ್ಯಾಧಿಕಾರಿ, ಡಾ. ಜಿ.ಜಿ. ಭವಿಷ್ಯಕುಮಾರ್ ತಿಳಿಸಿದ್ದಾರೆ.

ಪತ್ರಿಕೆ ಹೇಳಿಕೆ ನೀಡಿರುವ ಅವರು, ಗೋಣಿಕೊಪ್ಪ ಪಶು ಆಸ್ಪತ್ರೆ, ಬೆಂಗಳೂರು ಕರುಣಾ ಟ್ರಸ್ಟ್, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ಲಸಿಕಾ ಶಿಬಿರ ಏರ್ಪಡಿಸಲಾಗಿದೆ.

ಬೆಳಿಗ್ಗೆ ೯ ರಿಂದ ಅಪರಾಹ್ನ ೧೨ರವರೆಗೆ ಶಿಬಿರ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು, ನಾಯಿ ಹುಚ್ಚು ರೋಗವನ್ನು ನಿರ್ಮೂಲನೆಗೊಳಿಸಲು ಸಹಕರಿಸಬೇಕಾಗಿ ಮನವಿ ಮಾಡಿಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗೆ ೯೪೮೦೬೧೬೭೧೭ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.