ಮಡಿಕೇರಿ, ಮೇ ೧೭: ರಾಷ್ಟಿçÃಯ ಡೆಂಗ್ಯೂ ಕುರಿತು ಜಾಗೃತಿ ದಿನಾಚರಣೆ ಮತ್ತು ನಿಯಂತ್ರಣ ಸಂಬAಧ ಸಾರ್ವ ಜನಿಕರಲ್ಲಿ ಅರಿವು ಮೂಡಿಸುವಲ್ಲಿ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಗುರುವಾರ ಮಾನವ ಸರಪಳಿ ಕಾರ್ಯಕ್ರಮ ಜರುಗಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ. ಸತೀಶ್ ಕುಮಾರ್, ಡಾ. ಶ್ರೀನಿವಾಸ ಬಿ.ಎಲ್. ಜಿಲ್ಲಾ ಸರ್ವೇಕ್ಷಣಾಧಿಕಾರಿ, (ಸಮಗ್ರ ರೋಗಗಳ ಕಣ್ಗಾವಲು ಮತ್ತು ನಿಯಂತ್ರಣ ಘಟಕ,) ಡಾ. ಮಧುಸೂದನ್, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ. ಚೇತನ್, ಮಡಿಕೇರಿ ತಾಲೂಕು ಅಧಿಕಾರಿ ಮತ್ತು ಇತರರು ಪಾಲ್ಗೊಂಡಿದ್ದರು.