ಮಡಿಕೇರಿ, ಮೇ ೧೭ : ಮೈಸೂರು ವಿಭಾಗದ ನಿವೃತ್ತ ಪಿಂಚಣಿದಾರರ ಕುಂದುಕೊರತೆ ನಿವಾರಣಾ ಸಭೆಯು ವೀಡಿಯೋ ಸಂವಾದದ ಮೂಲಕ ಶುಕ್ರವಾರ ನಡೆಯಿತು.

ಜಿಲ್ಲಾಧಿಕಾರಿ ವೆಂಕಟ್ ರಾಜಾ, ಪಿಂಚಣಿ ವಿಭಾಗದ ಅಪರ ನಿರ್ದೇಶಕರಾದ ರಾಜೇಶ್ವರಿ, ಜಿಲ್ಲಾ ಖಜಾನಾಧಿಕಾರಿ ರಘುನಾಥ್ ಹಾಗೂ ತಾಲ್ಲೂಕು ಖಜಾನಾಧಿಕಾರಿಗಳು ಇತರರು ಪಾಲ್ಗೊಂಡಿದ್ದರು. ನಿವೃತ್ತ ಪಿಂಚಣಿದಾರರು ಹಲವು ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದರು.